ಪೈಲಾರು ಶೌರ್ಯ ಯುವತಿ ಮಂಡಲದ ವತಿಯಿಂದ ಶೌರ್ಯ ವಿಕಸನ ನಾಯಕತ್ವ ಶಿಬಿರ

0

ಅಮರಮುಡ್ನೂರು ಗ್ರಾಮದ ಪೈಲಾರು ಶೌರ್ಯ ಯುವತಿ ಮಂಡಲದ ವತಿಯಿಂದ
ಅ. 8 ರಂದು ಗಾಂಧಿ ಜಯಂತಿ ಪ್ರಯುಕ್ತ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಹಾಗೂ ಯುವಕ ಯುವತಿಯರಿಗೆ ಶೌರ್ಯ ವಿಕಸನ ನಾಯಕತ್ವ ಶಿಬಿರ ವನ್ನು ಕುಕ್ಕುಜಡ್ಕದಲ್ಲಿರುವ ಪಂಚಾಯತ್ ನ ಕೊರಗಭವನದಲ್ಲಿ ನಡೆಸಲಾಯಿತು.

ಯುವತಿ ಮಂಡಲದ ಅಧ್ಯಕ್ಷೆ ರಾಜೀವಿ ಗೋಲ್ಯಾಡಿ ಅಧ್ಯಕ್ಷತೆ ವಹಿಸಿದ್ದರು. ಪಂ.ಸದಸ್ಯ ಅಶೋಕ್ ಚೂಂತಾರು ಶಿಬಿರವನ್ನುಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಶ್ರೀಮತಿ ಸ್ವಾತಿ ಪದವು, ಸಂಪನ್ಮೂಲ ವ್ಯಕ್ತಿ ರಜನಿಕಾಂತ್ ಉಮ್ಮಡ್ಕ ಉಪಸ್ಥಿತರಿದ್ದರು.


ಕು. ಅನುಷಾ ಪ್ರಾರ್ಥಿಸಿದರು. ಶ್ರೀಲತಾ ದಾತಡ್ಕ ಸ್ವಾಗತಿಸಿದರು. ಶ್ವೇತ ನಾಯರ್ ಕಲ್ಲು ವಂದಿಸಿದರು.
ಪುಷ್ಪಲತಾ ನಾಯರ್ ಕಲ್ಲು ಕಾರ್ಯಕ್ರಮ ನಿರೂಪಿಸಿದರು.