ಹರಿಹರ ಪಲ್ಲತಡ್ಕ; ಪೋಷಣ್ ಮಾಸಾಚರಣೆ

0

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುಳ್ಯ ಅಮೃತ ಗೊಂಚಲು ಸ್ತ್ರೀ ಶಕ್ತಿ ಸಮಿತಿ ಇದರ ವತಿಯಿಂದ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಅ. 7 ರಂದು ಅಮೃತ ಗೊಂಚಲು ಸಮಿತಿ ಅಧ್ಯಕ್ಷೆ ಶ್ರೀಮತಿ ಲತಾ ಹಿಮ್ಮತ್ ಕಿರಿಭಾಗ ಇವರ ಅಧ್ಯಕ್ಷತೆಯಲ್ಲಿ ಹರಿಹರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಸಲಾಯಿತು . ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ದೀಪ ಬೆಳಗಿಸಿ ಶುಭ ಹಾರೈಸಿದರು. ಕೊಲ್ಲಮೊಗ್ರ ವಲಯದ ಮೇಲ್ವಿಚಾರಕರಾದ ಶ್ರೀಮತಿ ದೀಪಿಕಾರವರು ಪ್ರಾಸ್ತಾವಿಕವಾಗಿ ಷೋಷಣ್ ಮಾಸಾಚರಣೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಪೌಷ್ಠಿಕ ಆಹಾರ ಸ್ಪರ್ಧೆ ನೆಡಲಾಯಿತು.

ಹರಿಹರಪಲ್ಲತ್ತಡ್ಕ ಗ್ರಾ.ಪಂ. ಅಧ್ಯಕ್ಷರಾದ ಶ್ರೀಯುತ ವಿಜಯಕುಮಾರ್ ಅಂಙಣ, ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರಾದ ಡಾ. ತ್ರಿಮೂರ್ತಿ, ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಕೂಜುಗೋಡು, ದೇವಚಳ್ಳ ಗ್ರಾ.ಪಂ ಅಧ್ಯಕ್ಷರಾದ ಶೈಲೇಶ್ , ಹರಿಹರ ಪಲ್ಲತಡ್ಕ ಗ್ರಾ..ಪಂ ಸದಸ್ಯರಾದ ಶ್ರೀಮತಿ ಬಿಂದು, ಶ್ರೀಮತಿ ಶಿಲ್ಪಾ, ಅಂಗನವಾಡಿ ಕಾರ್ಯಕರ್ತೆಯರಾದ, ಶ್ರೀಮತಿ ಹರಿಣಿ, ಶ್ರೀಮತಿ ತೀರ್ಥ ಕುಮಾರಿ, ಶ್ರೀಮತಿ ನೇತ್ರಾವತಿ ಶ್ರೀಮತಿ ಅನಂತೇಶ್ವರಿ, ಸಿ.ಹೆಚ್.ಓ ಕುಮಾರಿ ಶಾಂತವ್ವ, ಆಶಾ ಕಾರ್ಯಕರ್ತೆರಾದ ಶ್ರೀಮತಿ ಪುಷ್ಪಾವತಿ, ಶ್ರೀಮತಿ ಶೋಭಾ ಹಾಗೂ ಎಲ್ಲಾ ಸ್ತ್ರೀ ಶಕ್ತಿ ಗುಂಪುಗಳ ಸರ್ವ ಸದಸ್ಯರು ಉಪಸ್ಥಿತರಿದ್ದರು ಶ್ರೀಮತಿ ಹರ್ಷಿಣಿಯವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಅಶ್ವಿನಿ ಸ್ವಾಗತಿಸಿ, ಶ್ರೀಮತಿ ನವ್ಯ ವಂದಿಸಿದರು.