ದುಗ್ಗಲಡ್ಕ: ಬೈಕ್ ಅಪಘಾತ -ಯುವಕನಿಗೆ ಗಂಭೀರ ಗಾಯ

0


ಸೋಣಂಗೇರಿ ಸಮೀಪದ ಮಿತ್ತಮಜಲಿನಲ್ಲಿ ಬೈಕ್ ಸ್ಕಿಡ್ ಆಗಿ ಯುವಕ ಗಂಭೀರ ಗಾಯಗೊಂಡ ಘಟನೆ ನಿನ್ನೆ ಸಂಜೆ( ಅ.15) ಸಂಭವಿಸಿದೆ.
ಸುಳ್ಯ ಕಡೆಯಿಂದ ದುಗ್ಗಲಡ್ಕಕ್ಕೆ ಹೋಗುವ ಬೈಕ್ ನಲ್ಲಿ ಹಿಂಬದಿ ಸವಾರರಾಗಿ ದುಗ್ಗಲಡ್ಕದ ಚಿದಾನಂದ ಎಂಬವರು ಸಂಚರಿಸುತ್ತಿದ್ದರು. ಮಿತ್ತಮಜಲಿನಲ್ಲಿ ಬೈಕ್ ಸ್ಕಿಡ್ ಆಗಿ ಚಿದಾನಂದರು ರಸ್ತೆಗೆ ಎಸೆಯಲ್ಪಟ್ಟು ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡರೆಂದು ತಿಳಿದುಬಂದಿದೆ. ತಕ್ಷಣ ಅವರನ್ನು ಅಂಬ್ಯುಲೆನ್ಸ್ ಮೂಲಕ ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ವೈದ್ಯರ ಸಲಹೆಯ ಮೇರೆಗೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿದ್ದಾರೆ.