ಅಗ್ನಿವೀರ್’ಗೆ ಆಯ್ಕೆಗೊಂಡ ದರ್ಶನ್ ಪೈಕ – ಅತ್ಯಾಡಿಯವರಿಗೆ ಅಭಿನಂದಿಸಿದ ಊರವರು

0

ಗುತ್ತಿಗಾರು ಗ್ರಾಮದ ಪೈಕ- ಅತ್ಯಾಡಿ ನಿವಾಸಿ ದರ್ಶನ್ ಚೆರಿಯನ ಮನೆ ಅವರು ಅಗ್ನಿ ವೀರ್ ಗೆ ಆಯ್ಕೆಯಾಗಿದ್ದು ಪೈಕ ಊರ ಸಮಸ್ತರ ಪರವಾಗಿ ಪೈಕ – ಅತ್ಯಾಡಿ ಮನೆಯಲ್ಲಿ ಅ.16 ಅವರನ್ನು ಗೌರವಿಸಲಾಯಿತು.

ಈ ಸಂದರ್ಭ ಗ್ರಾ. ಪಂ. ಸದಸ್ಯರಾದ ವೆಂಕಟ್ ವಳಲಂಬೆಯವರು ದರ್ಶನ್ ಗೆ ಶಾಲು, ಹಾರ ಹಾಕಿ ಫಲ ಪುಷ್ಪ ನೀಡಿ ಗೌರವಿಸಿ ಅಭಿನಂದನೆಯ ಮಾತುಗಳನ್ನಾಡಿದರು.

ಪೈಕ- ಊರಗೌಡರ ಪರವಾಗಿ ಜಗದೀಶ ಪೈಕ ಶುಭಹಾರೈಸಿದರು.
ಕಿಶೋರ್ ಕುಮಾರ್ ಬೊಮ್ಮದೇರೆ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು.
ಲೋಕೇಶ್ವರ ಡಿ.ಆರ್ ಧನ್ಯವಾದವನ್ನಿತ್ತರು.

ದರ್ಶನ್ ಮೂಲತಹ ಮಡಿಕೇರಿಯ ಚೆರಿಯಮನೆಯವರು. ತಂದೆ ಸಿ.ಕೆ ವೆಂಕಪ್ಪ ತಾಯಿ ದೇವಕಿ. ಗುತ್ತಿಗಾರಿನ ಪೈಕದ ವೆಂಕಟ್ರಮಣ ಅತ್ಯಾಡಿ ಮತ್ತು ನಾರಾಯಣ ಅತ್ಯಾಡಿ ಮನೆಯಲ್ಲಿ ವಾಸವಿದ್ದು ಗುತ್ತಿಗಾರಿನಲ್ಲಿ ಪ್ರೌಢ ಮತ್ತು ಪಿಯುಸಿ ಶಿಕ್ಷಣ ಪಡೆದಿದ್ದು ಈಗ ಸುಳ್ಯದಲ್ಲಿ ಅಂತಿಮ ಪದವಿಯಲ್ಲಿ ಓದುತಿದ್ದಾರೆ.