ಕುಕ್ಕಂದೂರು: ಅಗ್ನಿಶಾಮಕ ದಳದಿಂದ ಬಾವಿಗೆ ಬಿದ್ದ ನಾಯಿಯ ರಕ್ಷಣೆ

0

ತೋಟದಲ್ಲಿರುವ ಬಾವಿಯೊಂದಕ್ಕೆ ಬಿದ್ದಿದ್ದ ನಾಯಿಯನ್ನು ಅಗ್ನಿಶಾಮಕ ದಳದವರು ರಕ್ಷಿಸಿದ ಘಟನೆ ಜಾಲ್ಸೂರು ಗ್ರಾಮದ ಕುಕ್ಕಂದೂರಿನಲ್ಲಿ ಅ.24ರಂದು ಬೆಳಿಗ್ಗೆ ಸಂಭವಿಸಿದೆ.

ಕುಕ್ಕಂದೂರಿನ ಸತ್ಯಶಾಂತಿ ತ್ಯಾಗಮೂರ್ತಿ ಅವರ ತೋಟದಲ್ಲಿದ್ದ ಬಾವಿಗೆ ರಾತ್ರಿ ವೇಳೆ ನಾಯಿ ಬಿದ್ದಿದ್ದು, ವಿಷಯ ತಿಳಿದ ಅವರು ಸುಳ್ಯದ ಅಗ್ನಿಶಾಮಕ ದಳಕ್ಕೆ ದೂರವಾಣಿ ಮೂಲಕ ತಿಳಿಸಿದ್ದು, ಅಗ್ನಿಶಾಮಕ ದಳದವರು ಬಂದು ನಾಯಿಯನ್ನು ಬಾವಿಯಿಂದ ಮೇಲೆತ್ತಿ ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.