BREAKING NEWS

0

ಕೇರ್ಪಡ : ಬೈಕ್ ಗಳೆರಡು ಮುಖಾಮುಖಿ ಡಿಕ್ಕಿ – ಓರ್ವನಿಗೆ ಗಂಭೀರ ಗಾಯ

ಕೇರ್ಪಡ ಬಸ್ ನಿಲ್ದಾಣದ ಬಳಿಯಲ್ಲಿ ಬೈಕ್ ಗಳೆರಡು ಮುಖಾಮುಖಿಯಾಗಿರುವ ಘಟನೆ ಅ.24 ರಂದು ರಾತ್ರಿ ತಿಳಿದು ಬಂದಿದೆ.

ಅಲೆಂಗಾರ ಹೊನ್ನಪ್ಪ ಗೌಡರ ಪುತ್ರ ಹರೀಶ್ ರವರು ಅಲೆಕ್ಕಾಡಿಯಿಂದ ಸುಲಂತಡ್ಕ ಕಡೆಗೆ ಬರುತ್ತಿದ್ದ ಸಂದರ್ಭ ಮರ್ದೂರಡ್ಕ ರಾಮ ರವರ ಪುತ್ರ ಸುನೀಲ್ ರವರು ಸುಲಂತಡ್ಕದಿಂದ ನಿಂತಿಕಲ್ಲು ಕಡೆಗೆ ಬರುತ್ತಿದ್ದರು. ಇಬ್ಬರು ಪ್ರಯಾಣಿಸುತ್ತಿದ್ದ ಬೈಕುಗಳು ಪರಸ್ಪರ ಡಿಕ್ಕಿ ಹೊಡೆದು ಎರಡು
ಬೈಕುಗಳು ನಜ್ಜು ಗುಜ್ಜಾಗಿದೆ.

ಗಂಭೀರ ಗಾಯಗೊಂಡಿರುವ ಹರೀಶ್ ರವರು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.