ಮಂಚಿ -ಮೊಂತಿಮಾರು ಕ್ಷೇತ್ರದಲ್ಲಿ ”ಸ್ವರಸಿಂಚನ ”ಕಲಾ ತಂಡ ದಿಂದ ಮಧುರ ಭಕ್ತಿ ಗೀತೆ

0



ಮಂಚಿ -ಮೋoತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನರಾತ್ರಿ ಉತ್ಸವ ಹಾಗೂ ಅಖಂಡ ಭಜನೋತ್ಸವ 2023 ಪ್ರಯುಕ್ತ ಅ .23ರಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಟ್ಲಸ್ವರ ಸಿಂಚನ ಕಲಾತಂಡದಿಂದ ಮಧುರ ಭಕ್ತಿ ಗೀತೆ ನಡೆಯಿತು. ಕಲಾತಂಡದ ಮುಖ್ಯ ಶಿಕ್ಷಕಿ ಸವಿತಾ ಕೋಡಂದೂರು ಮತ್ತು ತಂಡ ದಿಂದ ಕಾರ್ಯಕ್ರಮ ನಡೆಯಿತು.
ಜೀವನದಲ್ಲಿ ಬಣ್ಣಗಳು ಎಷ್ಟು ಮುಖ್ಯವೋ ಹಾಗೆ ಭಾವನೆಗಳು ಅಷ್ಟೇ ಮುಖ್ಯ ವಿಶಿಷ್ಟ ವಸ್ತ್ರ ವಿನ್ಯಾಸ ಜಗಮಗಿಸುವ ವೇದಿಕೆಯಲ್ಲಿ ಹಾಡುಗಳು ರಂಗೇರಿತು. ಹೃದಯ ಅರಳಿಸುವ ಗಾನ ವೈಭವದ ರಸದೌತಣ ಗಾನ ಸಂಕೀರ್ತನೆ,ಭಕ್ತಿ ಗೀತೆಗಳು ಸುಮಧುರವಾಗಿ ಮೂಡಿ ಬಂದು ಎಲ್ಲಾ ಕಲಾ ಪ್ರೇಮಿಗಳ ಮೆಚ್ಚುಗೆಗಳಿಸಿತು.