ಮಂಗಳೂರಿನಲ್ಲಿ ಪಿಜಿಗೆ ಕಲ್ಲೆಸೆದ ಯುವಕ

0


ಸುಳ್ಯದ ಯುವಕನಿಂದ ನಡೆದ ಕೃತ್ಯ : ಸ್ಥಳೀಯರಿಂದ ಥಳಿತ

ಮಂಗಳೂರು ನಗರದ ಪಿ ಜಿ ಒಂದರಲ್ಲಿ ವಾಸವಿದ್ದ ಯುವತಿ ತನ್ನನ್ನು ಪ್ರೀತಿಸುತ್ತಿದ್ದು ತನ್ನೊಂದಿಗೆ ಸುತ್ತಾಡಲು ಕರೆದರೆ ಬರಲಿಲ್ಲ ಎಂದು ಸಿಟ್ಟಿಗೆದ್ದ ಯುವಕ ಆಕೆಯ ಪಿಜಿಗೆ ಕಲ್ಲು ತೂರಿದ ಘಟನೆ ಮಂಗಳೂರಿನ ಸೆಂಟ್ ಆಗ್ನೇಸ್ ಕಾಲೇಜು ಬಳಿ ನಡೆದಿದೆ.

ಕಲ್ಲು ಹೊಡೆದ ಯುವಕನನ್ನು ಸುಳ್ಯ ನಿವಾಸಿ ವಿವೇಕ್ (೧೮) ಎಂದು ಗುರುತಿಸಲಾಗಿದೆ.

ಈತ ಸೆಂಟ್ ಆಗ್ನೇಸ್ ಕಾಲೇಜ್ ಬಳಿ ಇರುವ ಪಿಜಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ. ಆಕೆಗೆ ಔಟಿಂಗ್ ಗೆ ಬರಲು ಹೇಳಿದಾಗ ಯುವತಿ ನಿರಾಕರಿಸಿದ್ದಾಳೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ವಿವೇಕ್, ಆಕೆ ಕೆಲಸ ಮಾಡುತ್ತಿದ್ದ ಪಿಜಿಗೆ ಕಲ್ಲು ಎಸೆದಿದ್ದಾನೆ.

ಘಟನೆಯಲ್ಲಿ ಕಟ್ಟಡದ ಗಾಜು ಪುಡಿಯಾಗಿದ್ದು, ಸಾರ್ವಜನಿಕರು ವಿವೇಕ್ ನನ್ನು ಹಿಡಿದು ಥಳಿಸಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.