ಸಚಿವ ದಿನೇಶ್ ಗುಂಡೂರಾವ್‌ರವರ ಸುಳ್ಯ ಭೇಟಿ ರದ್ದು

0

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್‌ರವರು ನ 16 ರಿಂದ ನ. 18ರ ವರೆಗಿನ ದ.ಕ. ಜಿಲ್ಲಾ ಪ್ರವಾಸ ಕಾರ್ಯಕ್ರಮ ರದ್ದುಗೊಂಡಿದೆ.


ಅವರು ನ. ೧೭ರಂದು ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕುಡಿಯುವ ನೀರಿನ ಯೋಜನೆ ಸುಮಾರು ಐವತ್ತೆಂಟು ಕೋಟಿ ರೂಪಾಯಿ ವೆಚ್ಚದ ಕಾಮಗಾರಿಯ ಶಿಲಾನ್ಯಾಸ ನೆರವೇರಿಸಲು ಸುಳ್ಯಕ್ಕೆ ಬರುವವರಿದ್ದರು. ಇದೀಗ ದಿನೇಶ್ ಗುಂಡೂರಾವ್‌ರವರು ಬರುತ್ತಿಲ್ಲವೆಂದು ತಿಳಿದುಬಂದಿದೆ.