ತಾಲೂಕು ಭಜನಾ ಪರಿಷತ್ ಸಭೆ- ಭಜನೋತ್ಸವದ ಪೂರ್ವ ತಯಾರಿ

0

ಸುಳ್ಯ ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಭಜನಾ ಪರಿಷತ್ ಹಾಗೂ ಭಜನೋತ್ಸವ ಸಮಿತಿ ದೊಡ್ಡತೋಟ ವಲಯದ ಆಶ್ರಯದಲ್ಲಿ ನ.26 ರಂದು ಚೊಕ್ಕಾಡಿಯಲ್ಲಿ ನಡೆಸಲು ಉದ್ದೇಶಿಸಿರುವ ಭಜನೋತ್ಸವದ ಪೂರ್ವ ತಯಾರಿಯ ಸಭೆಯು ಯೋಜನಾಧಿಕಾರಿ ಕಚೇರಿಯಲ್ಲಿ ನ.15 ರಂದು ನಡೆಯಿತು.

ಆಮಂತ್ರಣ ಪತ್ರ ಹಂಚಿಕೆಯ ಕುರಿತು ಹಾಗೂ ತಾಲೂಕಿನ ಎಲ್ಲಾ ಭಜಕರನ್ನು ಸೇರಿಸುವ ಬಗ್ಗೆ ಚರ್ಚಿಸಲಾಯಿತು. ಕಾರ್ಯಕ್ರಮದ ಅಯ ವ್ಯಯದ ಆರ್ಥಿಕ ಕ್ರೋಢಿಕರಣದ ವ್ಯವಸ್ಥೆ ಬಗ್ಗೆ ಪ್ರಸ್ತಾಪಿಸಲಾಯಿತು.

ಭಜನೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಕೋಡ್ತುಗುಳಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಯತೀಶ್ ರೈ ದುಗಲಡ್ಕ, ಯೋಜನಾಧಿಕಾರಿ ನಾಗೇಶ್ ಪಿ, ಪರಿಷತ್ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಕಾರ್ಯದರ್ಶಿ ಸತೀಶ್ ಟಿ.ಎನ್, ಕೋಶಾಧಿಕಾರಿ ಮಹೇಶ್ ಮೇರ್ಕಜೆ, ವಲಯಾಧ್ಯಕ್ಷ ಸೋಮಶೇಖರ ಪೈಕ ಹಾಗೂ ವಲಯದ ಭಜನಾ ಮಂಡಳಿಯ ಸದಸ್ಯರು ಭಾಗವಹಿಸಿದರು. ವಲಯ ಮೇಲ್ವಿಚಾರಕ ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿದರು.