ಅಜ್ಜಾವರ : ಗ್ರಂಥಾಲಯ‌ಸಪ್ತಾಹ ಅಂಗವಾಗಿ ‘ಅರಿವು‌ ಕೇಂದ್ರ’ ಕಾರ್ಯಕ್ರಮ

0

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮವು “ಅರಿವು ಕೇಂದ್ರ” ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಅಜ್ಜಾವರದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪಂಚಾಯತ್ ಅಧ್ಯಕ್ಷರಾದ ಬೇಬಿ ಕಲ್ತಡ್ಕ ನೆರವೇರಿಸಿದರು. ಗ್ರಂಥಾಲಯದಲ್ಲಿ ಪುಸ್ತಕ ಪ್ರದರ್ಶನ ಮಾಡಲಾಗಿತ್ತು. ಪಂಚಾಯತ್ ಸದಸ್ಯರಾದ ಲೀಲಾ ಮನಮೋಹನ್ “ಗ್ರಂಥಾಲಯದ ಮಹತ್ವದ” ಬಗ್ಗೆ ಗ್ರಂಥಾಲಯದ “ಓದುವ ಬೆಳಕು “ಮಕ್ಕಳಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಸದಸ್ಯರಾದ ಅಬ್ದುಲ್ಲ ಎ, ಗ್ರಂಥಾಲಯ ಸಮಿತಿ ಸದಸ್ಯರಾದ ಶಶ್ಮಿ ಭಟ್ ಅಜ್ಜಾವರ,ಗ್ರಂಥಾಲಯ ಮೇಲ್ವಿಚಾರಕಿ ಲಕ್ಷ್ಮಿ,ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.