ಮಿತ್ತೂರು ಉಳ್ಳಾಕುಲು ಮತ್ತು ನಾಯರ್ ದೈವಸ್ಥಾನದ ದೊಡ್ಡಪೂಜಾರಿ ರವಿರಾಮ ರೈಯವರಿಗೆ ಸನ್ಮಾನ

0

ಉಬರಡ್ಕ ಮಿತ್ತೂರು ಉಳ್ಳಾಕುಲು ಮತ್ತು ನಾಯರ್ ದೈವಸ್ಥಾನದ ದೊಡ್ಡ ಪೂಜಾರಿಯಾಗಿ 40 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯನ್ನು ಹೊಂದಿದ ರವಿರಾಮ ರೈ ಮಿತ್ತೂರು ರವರನ್ನು ಇತ್ತೀಚೆಗೆ ಮಿತ್ತೂರು ಕ್ಷೇತ್ರದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ವೆಂಕಟ್ರಮಣ ಕೆದಂಬಾಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ ಮಾಣಿಬೆಟ್ಟು, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ ಪಾನತ್ತಿಲ, ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಖಜಾಂಜಿ ಜಯರಾಮ ಗೌಡ ಮಾಣಿಬೆಟ್ಟು, ಪ್ರಧಾನ ಅರ್ಚಕ ವೆಂಕಟ್ರಮಣ ಭಟ್ ಕಾಡುತೋಟ, 30 ಒಕ್ಕಲು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಮುಂದಿನ ದೊಡ್ಡ ಪೂಜಾರಿಯಾಗಿ ಭಾಸ್ಕರ ರೈ ಮಿತ್ತೂರು ನಿರ್ವಹಿಸಲಿದ್ದಾರೆ.