ತಾಲೂಕಿನ ಮೊದಲ‌ ಜಾತ್ರೆ ಎಂದೇ ಪ್ರಸಿದ್ಧಿ ಪಡೆದ ಕರ್ಲಪ್ಪಾಡಿ‌ ಕ್ಷೇತ್ರದ ಜಾತ್ರೋತ್ಸವದ ಆಮಂತ್ರಣ ‌ಬಿಡುಗಡೆ

0

ಸುಳ್ಯ ತಾಲೂಕಿನಲ್ಲಿ ಮೊದಲ ಜಾತ್ರಾ ಉತ್ಸವ ಆಗುವ ಅಜ್ಜಾವರ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವರ ಜಾತ್ರೋತ್ಸವ ಸಂಭ್ರಮ ಡಿ.15 ರಿಂದ ಆರಂಭಗೊಳ್ಳಲಿದ್ದು, ಆಮಂತ್ರಣ ಪತ್ರ ಬಿಡುಗಡೆ ನಡೆಯಿತು.

ಬೆಳಗ್ಗೆ ದೇವಸ್ಥಾನದಲ್ಲಿ ಆಮಂತ್ರಣವನ್ನು ದೇವರ ಮುಂದೆ ಇರಿಸಿ ಪೂಜೆ ಮಾಡಿ, ಪ್ರಾರ್ಥನೆ ಮಾಡಲಾಯಿತು. ಬಳಿಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು, ಉತ್ಸವ ಸಮಿತಿಯವರು, ಸದಸ್ಯರು, ಪದಾಧಿಕಾರಿಗಳು ಇದ್ದು ಆಮಂತ್ರಣ ‌ಬಿಡುಗಡೆ ನಡೆಯಿತು.