ಕಾಯರ್ತೋಡಿ: ಶ್ರೀ ಮಹಾವಿಷ್ಣು ದೇಗುಲಕ್ಕೆ ಅಯೋಧ್ಯೆ ಮಂತ್ರಾಕ್ಷತೆ

0

ದೇಗುಲದಲ್ಲಿ ಐದು ದಿನ ಪೂಜೆಯ ಬಳಿಕ ಪ್ರತೀ ಹಿಂದೂಗಳ ಮನೆಗೆ ವಿತರಣೆ

ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಅಯೋಧ್ಯೆ ರಾಮಜನ್ಮಭೂಮಿಯ ಪವಿತ್ರ ಮಂತ್ರಾಕ್ಷತೆಯು ಡಿ.5ರಂದು ಆಗಮಿಸಿದ್ದು, ದೇವಸ್ಥಾನದ ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ‌.ಕೆ. ಉಮೇಶ್ ಹಾಗೂ ಮಾಜಿ ವ್ಯವಸ್ಥಾಪನ ಸಮಿತಿ ಸದಸ್ಯರುಗಳು ಸ್ವೀಕರಿಸಿದರು.

ಮಂತ್ರಾಕ್ಷತೆಗೆ ದೇವಸ್ಥಾನದಲ್ಲಿ ಐದು ದಿನಗಳ ಕಾಲ ಪೂಜೆ ನೆರವೇರಿಸಿದ ಬಳಿಕ ಕಾಯರ್ತೋಡಿ ವಾರ್ಡಿನ ಪ್ರತೀ ಹಿಂದೂಗಳ ಮನೆಗೆ ವಿತರಿಸಲಾಗುವುದು ಎಂದು ತಿಳಿದುಬಂದಿದೆ.