ಉಬರಡ್ಕ: ಮಾಣಿಬೆಟ್ಟುವಿನಲ್ಲಿ ಶ್ರೀ ಮಲೆ ಚಾಮುಂಡಿ, ಪರಿವಾರ ದೈವಗಳ ಪ್ರತಿಷ್ಠೆ

0


ಉಬರಡ್ಕ ಮಿತ್ತೂರು ಗ್ರಾಮದ ಮಾಣಿಬೆಟ್ಟು ಎಂಬಲ್ಲಿ ಶ್ರೀ ಮಲೆ ಚಾಮುಂಡಿ, ಶ್ರೀ ಗುಳಿಗ ಹಾಗೂ ಶ್ರೀ ಬೈರವ ದೈವಗಳ ನೂತನ ಕಟ್ಟೆಯಲ್ಲಿ ಪ್ರತಿಷ್ಠೆ ಡಿ.6ರಿಂದ ಆರಂಭಗೊಂಡು ಡಿ. 9 ರವರೆಗೆ ನಡೆಯಲಿದೆ.


ಡಿ.6 ರಂದು ರಾತ್ರಿ ದೇವತಾ ಪ್ರಾರ್ಥನೆ, ಸುದರ್ಶನ ಹೋಮ, ವಾಸ್ತು ಹೋಮ ಇತ್ಯಾದಿ ವೈದಿಕ ಕಾರ್ಯಕ್ರಮ ನಡೆಯಿತು. ಇಂದು ಬೆಳಿಗ್ಗೆ ಮಲೆ ಚಾಮುಂಡಿ ಮತ್ತು ಗುಳಿಗ ದೈವಗಳ ಪ್ರತಿಷ್ಠೆ ನಡೆಯಿತು.

ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದೈವ ಕಟ್ಟೆಗಳ ಸಮಿತಿ ಅಧ್ಯಕ್ಷ ನಾರಾಯಣ ಮಣಿಯಾಣಿ, ಶ್ರೀಮತಿ ಶಾರದಾ ಮಾಣಿಬೆಟ್ಟು ಮತ್ತು ಮನೆಯವರು, ಕಟ್ಟೆಗೆ ಸಂಬಂಧಿಸಿದ ಮನೆಯವರು, ಊರವರು ಉಪಸ್ಥಿತರಿದ್ದರು.
ಡಿ.9 ರಂದು ಬೈರವ ದೈವದ ಪ್ರತಿಷ್ಠೆ ನಡೆಯಲಿದೆ.