ಗಾಂಧಿನಗರ :ತ್ವಯ್ಬಾ ಯೂಥ್ ವಿಂಗ್ ಆಶ್ರಯದಲ್ಲಿ ಏಕದಿನ ಕಥಾಪ್ರಸಂಗ

0

ಗಾಂಧಿನಗರ ತ್ವಯ್ಬಾ ಯೂಥ್ ವಿಂಗ್ ವತಿಯಿಂದ ಏಕದಿನ ಕಥಾಪ್ರಸಂಗ ಕಾರ್ಯಕ್ರಮ ಗಾಂಧಿನಗರದ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಡಿಸೆಂಬರ್ 5ರಂದು ನಡೆಯಿತು. ಖ್ಯಾತ ಕಥಾ ಪ್ರಸಂಗ ಗಾಯಕ ಝುಬೈರ್ ಮಾಸ್ಟರ್ ತೊಟ್ಟಿಕ್ಕಲ್ ಧಾರ್ಮಿಕ ಕಥಾ ಪ್ರಸಂಗವನ್ನು ನಡೆಸಿಕೊಟ್ಟರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಂಧಿನಗರ ಜುಮಾ ಮಸೀದಿಯ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷ ಹಾಜಿ ಆದಂ ಕಮ್ಮಾಡಿಯವರು ವಹಿಸಿದ್ದರು.
ದುವಾಶಿರ್ವಚನವನ್ನು ಅಸ್ಸಯ್ಯದ್ ತ್ವಾಹಿರ್ ಸಹದಿ ತಂಗಳ್ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆ ಎಸ್ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ಆಯೋಜಿಸಿದ ವಿಷಯದ ಕುರಿತು ಮಾತನಾಡಿದರು.
ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಶಹೀದ್ ಟಿ ಎಂ ತೆಕ್ಕಿಲ್,ಮೀಫ್ ಉಪಾಧ್ಯಕ್ಷ ಹಾಜಿ ಮುಸ್ತಫಾ ಕೆ ಎಂ,ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ಸಾಮಾಜಿಕ ಕಾರ್ಯಕರ್ತ ದಾನಿಗಳಾದ ಇಬ್ರಾಹಿಂ ಹಾಜಿ ಕತ್ತರ್ ಮಂಡೆಕೋಲು,ಆದಂ ಹಾಜಿ ಕಮ್ಮಾಡಿ ಇವರುಗಳನ್ನು ಸನ್ಮಾನಿಸಲಾಯಿತು. ನಗರ ಪಂಚಾಯತಿ ಸದಸ್ಯ ಶರೀಫ್ ಕಂಠಿ ಸ್ವಾಗತಿಸಿ,ಸಂಚಾಲಕರದ ಸಿದ್ದೀಕ್ ಫ್ರೂಟ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರುಗಳಾದ ಅಬ್ದುಲ್ಲಾ ಅರಂಬೂರು,ನವಾಜ್ ಪಂಡಿತ್ ಜಯನಗರ,ಇಕ್ಬಾಲ್ ಸುಣ್ಣಮೂಲೆ, ಅಬ್ದುಲ್ ರಝಕ್ ಪುತ್ತುಚ್ಚ ಕರಾವಳಿ, ಅಬ್ದುಲ್ ಹಮೀದ್ ಚಾಯ್ಸ್,ಅಂಚು ನಾವೂರು, ಜುನೈದ್ ಗುರಂಪು,ಶಾಜಿದ್ ನಾವೂರು,ಲತೀಫ್ ಕುಂಬ್ಳೆ,ಹನಸ್ ಮೆಟ್ರೊ,ಸಿನಾನ್ ಬೀಜಕೊಚ್ಚಿ ಅಭಿ ಬೀಜಕೊಚ್ಚಿ,ಅಪ್ಪು ಮಾಸ್ಟರ್ ಸಹಕರಿಸಿದರು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಪುರುಷರು ಹಾಗೂ ಮಹಿಳೆಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ವಿಶೇಷ ಆಸನಗಳ ವ್ಯವಸ್ತೆಯನ್ನು ಕಲ್ಪಿಸಲಾಗಿತ್ತು.