ಸುಳ್ಯ ತಾಲೂಕು ಬಂಟರ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಸುಳ್ಯದ ಕೇರ್ಪಳದ ಬಂಟರ ಭವನದಲ್ಲಿ ಡಿ.31ರಂದು ಜರುಗಲಿರುವ ಸುಳ್ಯ ತಾಲೂಕು ಬಂಟರ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ತಾಲೂಕು ಬಂಟರ ಸಂಘದ ಅಧ್ಯಕ್ಷ ಜಯಪ್ರಕಾಶ್ ರೈ ಅವರು ಡಿ.9ರಂದು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಬಂಟರ ಸಂಘದ ಪ್ರದಾನ ಕಾರ್ಯದರ್ಶಿ ಸುಭಾಷ್ಚಂದ್ರ ರೈ, ಕೋಶಾಧಿಕಾರಿ ಗಂಗಾಧರ ರೈ, ಅರಂತೋಡು ವಲಯ ಬಂಟರ ಸಂಘದ ಅಧ್ಯಕ್ಷ ಜೆ.ಕೆ. ರೈ, ಪಂಜ ವಲಯ ಅಧ್ಯಕ್ಷ ಪದ್ಮನಾಭ ರೈ, ದಯಾಕರ ರೈ ನಾವೂರು, ಕುಸುಮಾಧರ ರೈ, ಶ್ರೀಮತಿ ಕಮಲಾಕ್ಷಿ ಶೆಟ್ಟಿ ಸೇರಿದಂತೆ ತಾಲೂಕು ಬಂಟರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಸುಭಾಷ್ಚಂದ್ರ ರೈ ಸ್ವಾಗತಿಸಿ, ಶ್ರೀಮತಿ ಮೀರಾ ಮುರಳೀಧರ ರೈ ವಂದಿಸಿದರು. ಉಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.