ಕಾವ್ಯ ಬಿ.ಹೆಚ್.ಬೆರಳಚ್ಚು ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್

0

ಜನವರಿಯಲ್ಲಿ ನಡೆದ 2023 ನೇ ಸಾಲಿನ ಇಂಗ್ಲಿಷ್ ಬೆರಳಚ್ಚು ವಿಭಾಗದ ಪರೀಕ್ಷೆಯಲ್ಲಿ ಕಾವ್ಯ ಬಿ.ಹೆಚ್.ಡಿಸ್ಟಿಂಕ್ಷನ್ ಪಡೆದಿದ್ದಾರೆ.

ಇವರಿಗೆ ಡಿ.10ರಂದು ಕರ್ನಾಟಕ ರಾಜ್ಯ ವಾಣಿಜ್ಯ ಮಂಡಳಿ ವತಿಯಿಂದ ಮಂಗಳೂರಿನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪುತ್ತೂರಿನ ದರ್ಬೆಯಲ್ಲಿರುವ ಲಕ್ಷ್ಮಿ ಇನ್ಸ್ಟಿಟ್ಯೂಟ್ ಟೈಪಿಂಗ್ & ಕಂಪ್ಯೂಟರ್ ಇಲ್ಲಿ ವ್ಯಾಸಂಗ ಮಾಡಿದ್ದು, ಸುಳ್ಯದ ಅಗ್ನಿಶಾಮಕ ದಳದ ಅಧಿಕಾರಿ ಬಿ.ಹರಿಶ್ಚಂದ್ರ ಹಾಗೂ ರಂಜಿನಿ ದಂಪತಿಯ ಪುತ್ರಿ.
ಇವರು ಪ್ರಸ್ತುತ ಪೈಚಾರಿನ ಆರ್ತಾಜೆಯಲ್ಲಿ ನೆಲೆಸಿದ್ದಾರೆ.