ಭವಿಷ್ ಬೆಳ್ಳಾರೆ ಏಕಪಾತ್ರಾಭಿನಯದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

0

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ನವದೆಹಲಿ ಆಯೋಜಿಸಿದ ಕಲೋತ್ಸವ 2023 ರ ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ವಿದ್ಯಾರ್ಥಿ ಭವಿಷ್ ಬೆಳ್ಳಾರೆ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜನವರಿ ತಿಂಗಳಲ್ಲಿ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಏಕಪಾತ್ರಾಭಿನಯದಲ್ಲಿ ಸ್ಪರ್ಧಿಸಲಿದ್ದಾರೆ.
ಇವರು ಉಡುಪಿ ಕಟಪಾಡಿ ತ್ರಿಷಾ ವಿದ್ಯಾ ಪದವಿ ಪೂರ್ವ ಕಾಲೇಜಿನ
ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿದ್ದು ಬೆಳ್ಳಾರೆ ತಡಗಜೆ ನಿವಾಸಿ ಶ್ರೀಮತಿ ಭಾರತಿ ಮತ್ತು ರುಕ್ಮಯ್ಯ ಮೂಲ್ಯ ದಂಪತಿ ಪುತ್ರ.
ಇವರು ಬೆಳ್ಳಾರೆ ಕೆಪಿಎಸ್ ನ ಹಳೆ ವಿದ್ಯಾರ್ಥಿಯಾಗಿದ್ದಾರೆ.