ಪಂಜದ ಕಾರು ಮತ್ತು ಸ್ಕೂಟರ್ ನಡುವೆ ಕಡಬದಲ್ಲಿ ಅಪಘಾತ

0

ಕಡಬದ ಕಳಾರ ಮಸೀದಿ ಸಮೀಪ ನಿನ್ನೆ ತಡ ರಾತ್ರಿ ಕಾರು ಮತ್ತು ಸ್ಕೂಟರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಶಾಲಾ ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮೃತ ಬಾಲಕ ಕಳಾರದಲ್ಲಿ ವಾಸವಿರುವ ಚಂದ್ರಶೇಖರ ಅವರ ಪುತ್ರ , ಕಡಬದ ಸರಸ್ವತಿ ವಿದ್ಯಾ ಸಂಸ್ಥೆಯ ಎಂಟನೇ ತರಗತಿ ವಿದ್ಯಾರ್ಥಿ.
ಸ್ಕೂಟರ್ ಚಲಾಯಿಸುತ್ತಿದ್ದ ಚಂದ್ರಶೇಖರ ಮತ್ತು ಅವರ ಇನ್ನೋರ್ವ ಪುತ್ರಿಗೆ ಗಂಭೀರ ಗಾಯಗಖಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸರಸ್ವತಿ ಶಾಲೆಯಲ್ಲಿ ನಿನ್ನೆ ಕ್ರೀಡೋತ್ಸವ ಮತ್ತು ವಾರ್ಷಿಕೋತ್ಸವವಿದ್ದು ಈ ಕಾರ್ಯಕ್ರಮ ಮುಗಿದ ಚಂದ್ರಶೇಖರರು ಮಕ್ಕಳೊಂದಿಗೆ ವಾಪಸ್ ಆಗುತ್ತಿದ್ದ ವೇಳೆ ಪಂಜ ಸಮೀಪದ ಕೂತ್ಕುಂಜದ ಪರಮೇಶ್ವರ ಎಂಬವರು ಚಲಾಯಿಸುತ್ತಿದ್ದ ಕಾರು ಢಿಕ್ಕಿ ಹೊಡೆಯಿತೆನ್ನಲಾಗಿದೆ. ಕಡಬ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.