ಡಿ.23: ಕೇರ್ಪಳದಲ್ಲಿ ಪಯಸ್ವಿನಿ ಸಂಭ್ರಮ

0

`ಅಮ್ಮೆರ್’ ತುಳು ನಾಟಕ ಪ್ರದರ್ಶನ

ಸುಳ್ಯ ಕೇರ್ಪಳದ ಪಯಸ್ವಿನಿ ಯುವಕ ಮಂಡಲದ 30 ನೇ ವರ್ಷದ ಸವಿನೆನಪಿಗಾಗಿ ಕೇರ್ಪಳ ಶಾಲಾ ವಠಾರದಲ್ಲಿ ಪಯಸ್ವಿನಿ ಸಂಭ್ರಮ ಕಾರ್ಯಕ್ರಮ ಡಿ.23ರಂದು ನಡೆಯಲಿದೆ.

ಅ.3 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಬಳಿಕ ಶ್ರೀ ಚೆನ್ನಕೇಶವ ಮಹಿಳಾ ಭಜನಾ ಮಂಡಳಿ ಸುಳ್ಯ ಇವರಿಂದ ಭಜನಾ ಸಂಭ್ರಮ. ಬಳಿಕ ಸ್ಥಳೀಯ ಅಂಗನವಾಡಿ, ಕೇರ್ಪಳ ಶಾಲೆ ಹಾಗೂ ಊರಿನ ಸ್ಥಳೀಯ ಪ್ರತಿಭೆಗಳಿಂದ ವಿವಿಧ ವಿನೊದಾವಳಿಗಳು ನಡೆಯುವುದು. ಸಂಜೆ ಸಭಾ ಕಾರ್ಯಕ್ರಮ ನಡೆಯಲಿದ್ದು , ಸಾಧಕರಿಗೆ ಹಾಗೂ ಯುವಕ ಮಂಡಲಕ್ಕೆ ಪ್ರೋತ್ಸಾಹ ನೀಡಿದ ಗಣ್ಯರಿಗೆ ಪಯಸ್ವಿನಿ ಗೌರವ ನೀಡಲಾಗುವುದು.

ಶಾಸಕಿ ಭಾಗೀರಥಿ ಮುರುಳ್ಯ, ತಹಶೀಲ್ದಾರ್ ಮಂಜುನಾಥ್ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಸ್ಥಳೀಯ ಕಲಾವಿದರಿಂದ ಭಾವಗಾನ ನಡೆಯುವುದು. ರಾತ್ರಿ ೯.೩೦ ರ ಬಳಿಕ ಅಮ್ಮ ಕಲಾವಿದರ್ ಕುಡ್ಲ ಇವರಿಂದ ಅಮ್ಮೆರ್ ತುಳು ಹಾಸ್ಯಮಯ ನಾಟಕ ಪ್ರದರ್ಶನವಾಗುವುದು ಎಂದು ಯುವಕ ಮಂಡಲದ ಅಧ್ಯಕ್ಷ ಶಿವಪ್ರಸಾದ್ ಕೇರ್ಪಳ ಹಾಗೂ ಕಾರ್ಯದರ್ಶಿ ಭರತ್ ಕುರುಂಜಿ ತಿಳಿಸಿದ್ದಾರೆ.