ಡಿ.24 ರಂದು ಆಲೆಟ್ಟಿಗೆ ವಿಕಸಿತ ಭಾರತ ಸಂಕಲ್ಪ ರಥ ಯಾತ್ರೆಯ ಆಗಮನ- ಸಂಸದ ಕಟೀಲ್ ರವರಿಂದ ಯೋಜನೆಯ ಚಾಲನೆ

0

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ರಥವು ಡಿ. 24 ರಂದು ಮಧ್ಯಾಹ್ನ 2 ಗಂಟೆಗೆ ಆಲೆಟ್ಟಿಗೆ ಆಗಮಿಸಲಿದೆ.

ರಥಯಾತ್ರೆಗೆ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ರವರು ಚಾಲನೆ ನೀಡಲಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಸುಳ್ಯ ಶಾಖೆಯ ಪ್ರಬಂಧಕ ಅಜಯ್ ಕುಮಾರ್ ಮುದ್ರಾ ಯೋಜನೆ ಸೇರಿದಂತೆ ಹಲವು ವಿಮಾ ಯೋಜನೆಗಳ ಹಾಗೂ ಕೇಂದ್ರ ಸರಕಾರದ ವಿವಿಧ ಸಾಲ ಯೋಜನೆಗಳ ಮಾಹಿತಿ ನೀಡಲಿದ್ದಾರೆ. ಬೀದಿ ಬದಿ ವ್ಯಾಪಾರ, ಅಂಗಡಿ, ಗುಡಿ ಕೈಗಾರಿಕೆ, ಸಣ್ಣ ಉದ್ಯಮ ಮುಂತಾದ ಸಣ್ಣ ಪ್ರಮಾಣದ ಸಾಲ ಯೋಜನೆಗಳಿಗೆ ಸ್ಥಳದಲ್ಲಿಯೇ ಮಂಜೂರಾತಿ ಪತ್ರ ವಿತರಣೆ ಮಾಡಲಾಗುವುದು. ಮುದ್ರಾಯೋಜನೆಯಲ್ಲಿ ಹತ್ತು ಸಾವಿರ ರೂಪಾಯಿಗಳಿಂದ ಹತ್ತು ಲಕ್ಷದ ತನಕ ಯೋಜನಾ ವರದಿಗಾನುಸಾರವಾಗಿ ಅರ್ಹತೆಯ ಮೇಲೆ ಸಾಲ ಪಡೆಯಲು ಅವಕಾಶವಿದ್ದು ದೊಡ್ಡ ಮೊತ್ತದ ಸಾಲಗಳಿಗೆ ಸ್ಥಳದಲ್ಲಿಯೇ ಅರ್ಜಿ ಸಲ್ಲಿಸಲು ಅವಕಾಶವಿದೆ.
ಮುದ್ರಾ ಯೋಜನೆಯಲ್ಲಿ ಸ್ವ -ಉದ್ಯೋಗ ಮಾಡಲಿಚ್ಚಿಸುವವರು ಅರ್ಜಿ ಸಲ್ಲಿಸಬಹುದು.