ಅಮರಮುಡ್ನೂರು : ವ್ಯಕ್ತಿ ನಾಪತ್ತೆ – ಪ್ರಕರಣ ದಾಖಲು

0

ಅಮರಮುಡ್ನೂರು ಗ್ರಾಮದ ಪೈಲೂರು ಎಂಬಲ್ಲಿಂದ ವ್ಯಕ್ತಿಯೋರ್ವರು ನಾಪತ್ತೆಯಾದ ಘಟನೆ ಡಿ.25 ರಂದು ನಡೆದಿದೆ.


ಪೈಲೂರು ಮನೆ ರಂಜಿತ್ (24) ಎಂಬವರು ನಾಪತ್ತೆಯಾಗಿದ್ದು ಈ ಬಗ್ಗೆ ಅವರ ತಂದೆ ಬಾಬು ಎಂಬವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ದೂರಿನಲ್ಲಿ ನನ್ನ ಮಗ ರಂಜಿತ್ ಪಿ ಪ್ರಾಯ: 24 ವರ್ಷ ಎಂಬಾತನು ಕುಕ್ಕುಜಡ್ಕದ ಅರುಣ್ ಕುಮಾರ್ ನಾಯರ್ ಕಲ್ಲು ಎಂಬದರ ಜೊತೆ ನುಮಾರು ಮೂರು ವರ್ಷಗಳಿಂದ ಶಾಮಿಯಾನದ ಕೆಲಸ ಮಾಡಿಕೊಂಡಿದ್ದು, ನಿನ್ನೆ 25-12-2022 ರಂದು ಬೆಳಿಗ್ಗೆ ಸುಮಾರು 08.15 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋಗಿರುತ್ತಾನೆ. ಕೆಲಸಕ್ಕೆ ಹೋದ
ರಂಜಿತ್ ರಾತ್ರಿ 08 ಗಂಟೆಯಾದರೂ ಮನೆಗೆ ಬಾರದೇ ಇದ್ದುದರಿಂದ ಅರುಣ್ ಕುಮಾರ್ ರವರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದಾಗ ರಂಜಿತ್ ಈ ದಿನ ಕೆಲಸಕ್ಕೆ ಬಂದಿರುವುದಿಲ್ಲ ಎಂದು ತಿಳಿಸಿದ್ದು, ಕೂಡಲೇ ರಂಜಿತ್ ನ ಮೊಬೈಲ್ ನಂಬ್ರಕ್ಕೆ ಕರೆ ಮಾಡಿದಾಗ ಸ್ವಿಚ್ ಆಪ್ ಎಂದು ಬರುತ್ತಿದ್ದುರಿಂದ ಮನೆಯವರು ನೆರೆಕರೆಯವರಲ್ಲಿ ಆತನ ಗೆಳೆಯರಲ್ಲಿ ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಈ ವರೆಗೆ ಪತ್ತೆಯಾಗದೇ ಇರುವುದರಿಂದ ಕಾಣೆಯಾದ ಮಗ ರಂಜಿತ ಪಿ ಎಂಬಾತನನ್ನು ಪತ್ತೆ ಹಚ್ಚಿ ಕೊಡಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.
ಕಾಣೆಯಾದವರ ಚಹರೆ:
ಹೆಸರು ರಂಜಿತ್ ಪಿ ಪ್ರಾಯ 24 ವರ್ಷ, ವಿದ್ಯಾಭ್ಯಾಸ- ದ್ವಿತೀಯ ಪಿಯುಸಿ ಮಾತನಾಡುವ ಭಾಷೆ ತುಳು, ಕನ್ನಡ ಮೈ ಕಟ್ಟು – ಸಾಧಾರಣ ಶರೀರ ಮೈ ಬಣ್ಣ, ಎಣ್ಣೆ ಕಪ್ಪು ಮೈ ಬಣ್ಣ ಎತ್ತರ: ಸುಮಾರು 5 ಅಡಿ 4 ಇಂಚು, ಧರಿಸಿದ ಬಟ್ಟೆ, ಹಳದಿ ಬಣ್ಣದ ಟೀ ಶರ್ಟ್ ಮತ್ತು ಬರ್ಮುಡ ಚಡ್ಡಿ ಧರಿಸಿದ್ದರು.