ಬಾಳುಗೋಡು ರಸ್ತೆಗೆ ಕಾಂಕ್ರೀಟ್ ಭಾಗ್ಯ ಯಾವಾಗ?

0


ತಾಲೂಕಿನ ಪ್ರಮುಖ ರಸ್ತೆಯಾದ ಹರಿಹರ ಪಲ್ಲತ್ತಡ್ಕದಿಂದ ಬಾಳುಗೋಡಿಗೆ ಹೋಗುವ ಮುಖ್ಯರಸ್ತೆಯ ಕಾಂತುಕುಮೇರಿ ಎಂಬಲ್ಲಿ ಕಳೆದ ಬಾರಿಯ ಚುನಾವಣೆಯ ಸಮಯದಲ್ಲಿ ರಸ್ತೆ ಅಭಿವೃದ್ಧಿಗಾಗಿ ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸಲು ಅಗೆದು ಹಾಕಲಾಗಿದ್ದು, ಇನ್ನೂ ಕೂಡ ಕಾಮಗಾರಿ ಪ್ರಾರಂಭವಾಗಿಲ್ಲ. ಈ ರಸ್ತೆಯು ಬಾಳುಗೋಡು ಸೇರಿದಂತೆ ಕೊತ್ನಡ್ಕ ಉಪ್ಪುಕಳದ ಊರುಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ಇದೀಗ ಆಗೆದು ಹಾಕಿದ ರಸ್ತೆಯು ಹೊಂಡ ಗುಂಡಿಗಳಿಂದ ತುಂಬಿದಲ್ಲದೆ ದ್ವಿಚಕ್ರ ಸವಾರಿಗಂತು ಹೋಗುವುದು ತೀರ ತ್ರಾಸದಾಯಕವಾಗಿದೆ.

ಆದ್ದರಿಂದ ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕಾಗಿದೆ. ಚಿತ್ರವರದಿ : ದಿನೇಶ್ ಹಾಲೆಮಜಲು.