ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಮತ್ಸ್ಯ ತೀರ್ಥ ಕ್ಕೆ ಮೀನುಗಾರಿಕಾ ಅಧಿಕಾರಿಗಳ ಭೇಟಿ

0

ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಮತ್ಸ್ಯ ತೀರ್ಥಕ್ಕೆ ಕೊಡಗು ಜಿಲ್ಲೆಯ ಮೀನುಗಾರಿಕಾ ಉಪನಿರ್ದೇಶಕರು, ಹಾರಂಗಿ ಮೀನು ಸಾಕಣಾ ಕೇಂದ್ರದ ಸಹಾಯಕ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ, ಪುತ್ತೂರು ವಿಭಾಗದ ಸಹಾಯಕ ನಿರ್ದೇಶಕರು ಭೇಟಿ ನೀಡಿ ಮತ್ಸ್ಯ ತೀರ್ಥ ನದಿಯಲ್ಲಿನ ಮಹಾಶೀರ್ ಮೀನುಗಳನ್ನು ವೀಕ್ಷಿಸಿ ಮೀನುಗಳಿಗೆ ನೀಡುವ ಆಹಾರದ ಬಗ್ಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪಕ ಆನಂದ ಕಲ್ಲಗದ್ದೆ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.