ಪೇರಾಲು : ಕುತ್ಯಾಡಿ ತರವಾಡು ಮನೆಯಲ್ಲಿ ಶ್ರೀ ಧರ್ಮದೈವ ಹಾಗೂ ಉಪದೈವಗಳ ನಡಾವಳಿ

0

ಮಂಡೆಕೋಲು ಗ್ರಾಮದ ಪೇರಾಲು ಕುತ್ಯಾಡಿ ಶ್ರೀ ಧರ್ಮದೈವಸ್ಥಾನ, ಕುತ್ಯಾಡಿ ತರವಾಡು ಮನೆಯಲ್ಲಿ ಶ್ರೀ ವೆಂಕಟರಮಣ ದೇವರ ಹರಿಸೇವೆ,ಶ್ರೀ ಧರ್ಮದೈವ ಹಾಗೂ ಉಪದೈವಗಳ ನಡಾವಳಿಯು ಜ.1 ರಿಂದ ಪ್ರಾರಂಭಗೊಂಡಿದ್ದು ಜ.3 ರವರೆಗೆ ನಡೆಯಲಿರುವುದು.
ಜ.1 ರಂದು ಬೆಳಿಗ್ಗೆ ಉಗ್ರಾಣ ತುಂಬಿಸಲಾಯಿತು.


ಜ.02 ರಂದು ಬೆಳಿಗ್ಗೆ ಶ್ರೀ ಗಣಪತಿ ಹವನ ಮತ್ತು ನಾಗತಂಬಿಲ
ಪೂರ್ವಾಹ್ನ ತರವಾಡು ಮನೆ ಮತ್ತು ದೈವಸ್ಥಾನದ ಶುದ್ಧಿ ಕಲಶ, ಶ್ರೀ ವೆಂಕಟರಮಣ ದೇವರ ಹರಿಸೇವೆ,ಮಧ್ಯಾಹ್ನ ಗಂಟೆ 12.30 ರಿಂದ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಅಪರಾಹ್ನ ಕೆಂಚರಾಯ ಪೂಜೆ ನಡೆಯಿತು.,ಸಂಜೆ ಗುರುಕಾರ್ನೋರು,ಸತ್ಯದೇವತೆ ಮತ್ತು ಪಾಷಾಣಮೂರ್ತಿ,ಗುಳಿಗ ಹಾಗೂ ಅಂಗಾರಬಾಕುಡ ದೈವಗಳ ಕೋಲ ನಡೆಯಿತು.
ಪ್ರಾತ:ಕಾಲ ವರ್ಣಾರ ಪಂಜುರ್ಲಿ ದೈವದ ಕೋಲ ಪೂರ್ವಾಹ್ನ ಗಂಟೆ 9.00 ರಿಂದ ಶ್ರೀ ಧರ್ಮದೈವದ ನಡಾವಳಿ ನಡೆಯುತ್ತಿದೆ.
ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.


ಎಂದು ಕುಟುಂಬದ ಯಜಮಾನರಾದ ಶಿವಪ್ಪ ಗೌಡ ಮತ್ತು ಆಡಳಿತ ಸಮಿತಿ ಅಧ್ಯಕ್ಷ ಜತ್ತಪ್ಪ ಗೌಡ ಶೆಟ್ಟಿಮಜಲು ತಿಳಿಸಿದ್ದಾರೆ.