ಜ‌.14: ಸುಳ್ಯಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲದಲ್ಲಿ ಧನುಪೂಜೆ ಸಮಾಪ್ತಿ

0

ಶ್ರೀ ಮಲ್ಲಿಕಾರ್ಜುನ ದೇವರಿಗೆ ಆಯಿರಕೊಡ ಅಭಿಷೇಕ – ಸಿಯಾಳಭಿಷೇಕ – ರಂಗಪೂಜೆ

ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಸನ್ನಿಧಿಯಲ್ಲಿ ಧನುಮಾಸದ ಪ್ರಯುಕ್ತ ಕಳೆದೊಂದು ತಿಂಗಳಿನಿಂದ ಜರುಗುತ್ತಿರುವ ಧನುಪೂಜೆಯು ಜ.14ರಂದು ಮಕರ ಸಂಕ್ರಮಣದಂದು ಸಮಾಪ್ತಿಗೊಳ್ಳಲಿದ್ದು, ಅಂದು ಶ್ರೀ ಮಲ್ಲಿಕಾರ್ಜುನ ದೇವರಿಗೆ ಆಯಿರ ಕೊಡ ಅಭಿಷೇಕ – ಸಿಯಾಳಭಿಷೇಕ, ರಾತ್ರಿ ರಂಗಪೂಜೆ ಜರುಗಲಿದೆ.

ಬೆಳಿಗ್ಗೆ ಶ್ರೀ ತೊಡಿಕಾನ ಮಲ್ಲಿಕಾರ್ಜುನ ಭಜನಾ ಸಂಘದ ಭಜನಾ ಸೇವೆಯೊಂದಿಗೆ ದೇವರಗುಂಡಿಯಿಂದ ತೀರ್ಥ ತಂದು ಗಣಪತಿ ಹೋಮ ನಡೆಯಲಿದೆ. ಬಳಿಕ ಶತರುದ್ರಾಭಿಷೇಕ ಮತ್ತು ಸಿಯಾಳಭಿಷೇಕ, ಶ್ರೀ ಕಾಂಚಿ ಕಾಮಕೋಟಿ ವೇದ ವಿದ್ಯಾಲಯ ಅರಂಬೂರಿನ ಶ್ರೀ ಭಾರದ್ವಾಜಾಶ್ರಮದವರಿಂದ ವೇದ ಪಾರಾಯಣ, ಮಧ್ಯಾಹ್ನ ಮಹಾಪೂಜೆ, ರಾತ್ರಿ ರಂಗಪೂಜೆ ಜರುಗಲಿದೆ.