ಸುಳ್ಯದಲ್ಲಿ ‌ಕರ್ನಾಟಕ ಒನ್ ಸೇವಾ ಕೇಂದ್ರ ಉದ್ಘಾಟನೆ

0

ಸುಳ್ಯದ ರಥಬೀದಿಯಲ್ಲಿ ಬಿಎಸ್ ಎನ್.ಎಲ್ ಕಚೇರಿ ಸಮೀಪ ಅಶ್ವಿನಿ ಕಾಂಪ್ಲೆಕ್ಸ್ ನಲ್ಲಿ ಕರ್ನಾಟಕ ಒನ್ ಸೇವಾ ಕೇಂದ್ರ ಜ.8ರಂದು ಉದ್ಘಾಟನೆಗೊಂಡಿತು.

ಶಾಸಕಿ‌ ಭಾಗೀರಥಿ ಮುರುಳ್ಯ ಸಂಸ್ಥೆಯನ್ನು ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಮಂಜುನಾಥ್ ಜಿ, ವಲಯಾರಣ್ಯಾಧಿಕಾರಿ ಮಂಜುನಾಥ್ ಎನ್, ನ್ಯಾಯವಾದಿ ಹರೀಶ್ ಬೂಡುಪನ್ನೆ, ಕಟ್ಟಡ ಮಾಲಕ ದಾಮೋದರ ಗೌಡ ನಾರ್ಕೋಡು ಮೊದಲಾದವರು ಉಪಸ್ಥಿತರಿದ್ದರು.
ಕರ್ನಾಟಕ ಸರಕಾರದ ಎಲ್ಲ ಸೇವೆಗಳನ್ನು ಗ್ರಾಹಕರಿಗೆ‌ ನೀಡಲಾಗುತ್ತದೆ ಎಂದು ಪ್ರಸಾದ್ ಪಿ.ಎಲ್. ತಿಳಿಸಿದ್ದಾರೆ.