ಜ.12ರಿಂದ ಜ.16 ರವರೆಗೆ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಮಹೋತ್ಸವ

0

ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಜ.16 ಧಾರ್ಮಿಕ ಸಭೆ, ರಥೋತ್ಸವ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಮಹೋತ್ಸವ
ಧಾರ್ಮಿಕ ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜ.12 ರಿಂದ ಜ.16ರವರೆಗೆ ನಡೆಯಲಿದೆ. ಜ.12ರಂದು ಶ್ರೀ ಕಾರ್ತಿಕ ವೇದಿಕೆಯಲ್ಲಿ ಸಾಯಂಕಾಲ ಗಂಟೆ 5.00ಕ್ಕೆ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮೋಹನರಾಮ ಎಸ್.ಸುಳ್ಳಿಯವರು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಸಂಜೆ ಗಂಟೆ 5.45 ರಿಂದ ಕು.ವೈಷ್ಣವಿ ಕಿಶೋರ್, ಬೆಂಗಳೂರು ಇವರಿಂದ “ಭರತನ್ಯಾಟ” ಕಾರ್ಯಕ್ರಮ,ಸಂಜೆ 7.00 ರಿಂದ ಪ್ರಕಾಶ್ ಮಲ್ಪೆ ಸಾರಥ್ಯದಲ್ಲಿ “ಉತ್ತಿಷ್ಠ ಭಾರತ” ಗೀತ – ಕಥನ ಕಾರ್ಯಕ್ರಮ, ರಾತ್ರಿ ಗಂಟೆ 9.00 ರಿಂದ ವೈಷ್ಣವಿ ನಾಟ್ಯಾಲಯ (ರಿ) ಪುತ್ತೂರು ಇದರ ನಿರ್ದೇಶಿಕಿ ಯೋಗೀಶ್ವರಿ ಜಯಪ್ರಕಾಶ್ ಇವರ ಶಿಷ್ಯವೃಂದದಿಂದ “ನೃತ್ಯಾರ್ಪಣಂ” ಭರತನ್ಯಾಟ ಕಾರ್ಯಕ್ರಮ ನಡೆಯಲಿದೆ.


ಜ.13 ಸಂಜೆ ಗಂಟೆ 5.45 ರಿಂದ ನೃತ್ಯೋಪಾಸನಾ ಕಲಾಕೇಂದ್ರ (ರಿ.) ಪುತ್ತೂರು ಪ್ರಸ್ತುತ ಪಡಿಸುವ ಗುರು ವಿದುಷಿ ಶಾಲಿನಿ ಆತ್ಮಭೂಷಣ್ ನೃತ್ಯ ನಿರ್ದೇಶನದಲ್ಲಿ “ನೃತ್ಯೋಹಂ” , ನಡೆಯಲಿದೆ. ಸಂಜೆ ಗಂಟೆ 7.00 ರಿಂದ ಶ್ರೀ ದೇವಿ ಸಚಿನ್ ಧರ್ಮಸ್ಥಳ ಮತ್ತು ಬಳಗದವರಿಂದ “ನಿನಾದ ಗಾನ ಸಂಭ್ರಮ”, ನಡೆದು, ರಾತ್ರಿ ಗಂಟೆ 8.15 ರಿಂದ ವಿದ್ಯಾಶ್ರೀ ರಾಧಾಕೃಷ್ಣ ಮಂಗಳೂರು ಇವರ ಯಜ್ಞ ತಂಡದವರಿಂದ “ನೃತ್ಯಸಂಗಮ ಹಾಗೂ ನೃತ್ಯರೂಪಕ” ನಡೆಯಲಿದೆ.

ಜ.14 ಸಂಜೆ ಗಂಟೆ 4.30 ರಿಂದ ಕರ್ನಾಟಕ ಸರಕಾರದ ಪೊಲೀಸ್ ವಾದ್ಯ ವೃಂದದಿಂದ ಮೈಸೂರು ಅರಮನೆ ವಾದ್ಯ ವೃಂದ ಇವರಿಂದ “ವಿಶೇಷ ವಾದ್ಯಗೋಷ್ಠಿ” ಕಾರ್ಯಕ್ರಮ ನಡೆಯಲಿದೆ. ಸಂಜೆ ಗಂಟೆ 6.00 ರಿಂದ ಕು. ನಿಧಿಶ್ರೀ ಕೆ.ಎನ್. ಹಾಗೂ ಕು. ಸ್ನೇಹಾ.ಕೆ.ಸಿ. ಚನ್ನರಾಯಪಟ್ಟಣ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆದು. ಸಂಜೆ ಗಂಟೆ 7.15 ರಿಂದ ನಾಟ್ಯಭೈರವಿ ನೃತ್ಯಶಾಲೆ, ಬೆಂಗಳೂರು ಡಾ. ಶ್ರುತಿ ಯನ್.ಮೂರ್ತಿ ಹಾಗೂ ಶಿಷ್ಯವೃಂದದಿಂದ ” ಭರತನಾಟ್ಯ ನೃತ್ಯರೂಪಕ “ಶ್ರೀ ಸುಬ್ರಹ್ಮಣ್ಯ ವೈಭವ” ನಡೆಯಲಿದೆ.

ಜ.15 ಸಂಜೆ ಗಂಟೆ 5.30 ರಿಂದ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಇಲ್ಲಿಯ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ “ಕುಮಾರ ವೈಭವ” ನಡೆಯಲಿದೆ. ಸಂಜೆ ಗಂಟೆ 7.00ರಿಂದ ಕು.ಗಂಗಾ ಶಶಿಧರನ್ ಗುರುವಾಯೂರು ಇವರಿಂದ “ವಯಾಲಿನ್ ವಾದನ” ಕಾರ್ಯಕ್ರಮ ನಡೆದು, ರಾತ್ರಿ ಗಂಟೆ 9.30ರಿಂದ ಸಸಿಹಿತ್ಲು ಶ್ರೀ ಭಗವತೀ ಮೇಳದವರಿಂದ ತುಳು ಯಕ್ಷಗಾನ ” ಮುಗುರುಮಲ್ಲಿಗೆ” ನಡೆಯಲಿದೆ.

ಜ.16 ರಂದು ಪೂರ್ವಾಹ್ನ ದೇವಾಲಯ ಆಡಳಿತ ದರ್ಮದರ್ಶಿಗಳ ಚಿಂತನಾ ಸಭೆ “ಗುಡಿ- ಜನರ ಜೀವನಾಡಿ” ಶ್ರೀ ಕಾರ್ತಿಕ ವೇದಿಕೆಯಲ್ಲಿ ನಡೆಯಲಿದ್ದು ಅಧ್ಯಕ್ಷತೆಯನ್ನು ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ವಹಿಸಲಿದ್ದಾರೆ, ಮುಖ್ಯ ಅತಿಥಿಯಾಗಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಶ್ರೀಮತಿ ಮಲ್ಲಿಕಾ ಪ್ರಶಾಂತ್ ಪಕ್ಕಲಾ , ಧಾರ್ಮಿಕ ಉಪನ್ಯಾಕರಾಗಿ ಕರ್ನಾಟಕ ರಾಜ್ಯ ದೇವಾಲಯ ಸಂವರ್ಧನಾ ಸಮಿತಿ ಸಂಯೋಜಕರಾದ ಮನೋಹರ್ ಮಠದ್ ಭಾಗವಹಿಸಲಿದ್ದಾರೆ. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮೋಹನ್ ರಾಂ ಸುಳ್ಳಿ, ವ್ಯವಸ್ಥಾಪನಾ ಸಮಿತಿ ಸದಸ್ಯರು ವೇದಿಕೆಯಲ್ಲಿ ಇರಲಿದ್ದಾರೆ. ಸಾಯಂಕಾಲ ಗಂಟೆ 6.00ರಿಂದ ಶ್ರೀ ಸುಬ್ರಹ್ಮಣ್ಯ ದೇವರ ರಥೋತ್ಸವ ನಡೆದು, ರಾತ್ರಿ 9.00ರಿಂದ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ, ಕೊಂಡದಕುಳಿ (ರಿ.) ಕುಂಭಾಶಿ ಇವರಿಂದ ಪೌರಾಣಿಕ ಯಕ್ಷಗಾನ “ಜಾಂಬವತಿ ಕಲ್ಯಾಣ” ನಡೆಯಲಿದೆ.