ಬೂಡು: ಉಬರಡ್ಕ ಮಿತ್ತೂರು ನಾಯರ್ ದೈವದ ಪೂಜಾರಿ ರವಿರಾಮ ರೈ ಯವರಿಗೆ ಸನ್ಮಾನ

0

ಸುಮಾರು 40 ವರ್ಷಗಳಿಂದ ಉಬರಡ್ಕ ಗ್ರಾಮದ ಮಿತ್ತೂರು ಉಳ್ಳಾಕುಳು ದೈವ ಹಾಗೂ ಮಿತ್ತೂರ್ ನಾಯರ್ ದೈವಗಳ ದೊಡ್ಡ
ಪೂಜಾರಿಯಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯರಾದ ರವಿರಾಮ ರೈ ಯವರನ್ನು
ಜ.11 ರಂದು ಬೂಡು ಮನೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಬಳ್ಳಾರ ಅರಸರ ಪ್ರತಿನಿಧಿ ಬೂಡು ರಾದಕೃಷ್ಣ ರೈ ಪ್ರಾಸ್ತಾವಿಕ ಮಾತಿನೊಂದಿಗೆ ಅವರ ಸೇವೆಯ ಕುರಿತು ಉಲ್ಲೇಖಿಸಿದರು.
ಕೇರ್ಪಳ ಮನೆಯ ಪರವಾಗಿ ಕೆ.ವಿ.ಜಿ.ಪಿ ಶಿವರಾಮ ಕೇರ್ಪಳ ರವಿರಾಮ ರೈಯವರನ್ನು ಗೌರವಿಸಿದರು.
ಉಬರಡ್ಕ ಮಿತ್ತೂರು ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ರೈ ಉಬರಡ್ಕ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಬೂಡು
ಹರಿಣಿ ಆರ್. ರೈ, ವಿಜಯ್ ಕುಮಾರ್ ರೈ, ರೇಖಾ ಆರ್. ರೈ, ಸುಧಾಕರ್ ರೈ, ರಾಧಿಕಾ ಎಸ್. ರೈ, ಪದ್ಮನಾಭ ರೈ, ಸುನಂದಾ ರೈ, ಲತಾ ವಿ. ರೈ, ಉಷಾ ಸಿ. ಶೆಟ್ಟಿ, ಶ್ರಾವ್ಯ ಆರ್. ರೈ, ವಿಜೇತ ವಿ. ರೈ, ವಿಧಿತ್ ವಿ. ರೈ, ವಿಪುಲ್ ಎಸ್. ರೈ, ತೇಜಸ್ ಎಸ್. ರೈ, ರಮೇಶ್ ಶೆಟ್ಟಿ ಮಿಪುಗುರಿ, ವಿನೋದ ಆರ್. ರೈ, ಕಿಶೋರ್ ಕುಮಾರ್ ಶೆಟ್ಟಿ,ಸಮಿಕ್ಷಾ ಲವ ಕುಮಾರ್ ಶೆಟ್ಟಿ, ಸುನಿಲ್ ಕುಮಾರ್ ಕೇರ್ಪಳ, ಮಹಾಬಲ ರೈ,ಪ್ರದೀಪ್ ರೈ ಬೂಡು, ಕುಸುಮಾಧರ ರೈ ಬೂಡು, ಜನಾರ್ಧನ ನಾಯ್ಕ ಕೇರ್ಪಳ,
ಭಾರತಿ ದಾಮೋದರ ಗೌಡ, ಮೋನಪ್ಪ ಪೂಜಾರಿ, ಬಾಲಕೃಷ್ಣ ಪೂಜಾರಿ,ವಾಸುದೇವ ನಾಯಕ್, ತೀಕ್ಷಣ್ ಗೌಡ, ಸತ್ಯಪ್ರಸಾದ್ ರೈ, ನ.ಪಂ.ಸದಸ್ಯ ಸುಧಾಕರ ಕೇರ್ಪಳ,
ಕುಕ್ಕಂದೂರು ಜೋಡು ದೈವಗಳ ಪ್ರಧಾನ ಅರ್ಚಕ ಸುಭಾಷ್ ರೈ, ಮಿತ್ತೂರ್ ದೈವಗಳ ಭಂಡಾರದ ಮೊಕ್ತೇಸರ ಕೆದಂಬಾಡಿ ವೆಂಕಟ್ರಮಣ ಗೌಡ,
ಪಿ. ಎಸ್. ಗಂಗಾಧರ್ ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.