ಆಲೆಟ್ಟಿ :ಪಂಜಿಮಲೆ ವಿಷ್ಣುಮೂರ್ತಿ ದೈವದ ಒತ್ತೆಕೋಲದ ಕೊಳ್ಳಿ ಮುಹೂರ್ತ

0

ಆಲೆಟ್ಟಿ ಪಂಜಿಮಲೆ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾಮೂಲಿನಂತೆ ಫೆ.19 ರಂದು ಜರುಗಲಿದ್ದು ಕೊಳ್ಳಿ ಮುಹೂರ್ತವು ಇಂದು ಬೆಳಗ್ಗೆ ನಡೆಯಿತು.

ಗುಂಡ್ಯ ಶ್ರೀ ವಯನಾಟ್ ಕುಲವನ್ ದೈವಸ್ಥಾನದಿಂದ ಬೆಳಗ್ಗೆ ವಿಷ್ಣುಮೂರ್ತಿ ದೈವದ ಪಾತ್ರಿ ರಾಮ ಮಣಿಯಾಣಿ ಹಾಗೂ ವಯನಾಟ್ ಕುಲವನ್ ದೈವದ ಪಾತ್ರಿ ಶಿವರಾಮ ಆಡಿಂಜ ರವರ ನೇತೃತ್ವದಲ್ಲಿ ಭಂಡಾರ ಆಗಮಿಸಿ ಒತ್ತೆಕೋಲ ಮಜಲಿನಲ್ಲಿ ಕೊಳ್ಳಿ ಮುಹೂರ್ತ ನೆರವೇರಿಸಲಾಯಿತು.


ಒತ್ತೆಕೋಲ ಸಮಿತಿ ಗೌರವಾಧ್ಯಕ್ಷ ರಾಮಯ್ಯ ಗೌಡ ಗುಂಡ್ಯ, ಅಧ್ಯಕ್ಷ ಸುಧಾಕರ ಆಲೆಟ್ಟಿ, ಕಾರ್ಯದರ್ಶಿ ಕೃಪಾಶಂಕರ ತುದಿಯಡ್ಕ, ಕೋಶಾಧಿಕಾರಿ ಶ್ರೀನಾಥ್ ಆಲೆಟ್ಟಿ, ಉಪಾಧ್ಯಕ್ಷ ಪವಿತ್ರನ್ ಗುಂಡ್ಯ,
ಸದಾಶಿವ ದೇವಸ್ಥಾನದ ವ್ಯ‌.ಸ.ಸದಸ್ಯ ಅಚ್ಚುತ ಮಣಿಯಾಣಿ ಆಲೆಟ್ಟಿ,ಭಜನಾ ಸಂಘದ ಗೌರವ ಸಲಹೆಗಾರ ಸುಧಾಮ ಆಲೆಟ್ಟಿ, ಗುಂಡ್ಯ ಸ್ಥಾನದ ಮನೆ ವಿನೋದ್ ಮತ್ತು ಭಾರತೀಯ ತೀಯ ಸಮಾಜ ಬಾಂಧವರು ಹಾಗೂ ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.