ಶ್ರೀಮತಿ ವಿದ್ಯಾಹರೀಶ್ ಬಂಗಾರಕೋಡಿ ರಾಜ್ಯಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಚಾಂಪಿಯನ್

0

ಬೆಂಗಳೂರಿನ ಹೊಸಕೋಟೆಯಲ್ಲಿ ಇತ್ತೀಚೆಗೆ ಜರುಗಿದ ಹಿರಿಯರ ಕ್ರೀಡಾಕೂಟದಲ್ಲಿ ಶ್ರೀಮತಿ ವಿದ್ಯಾಹರೀಶ್ ಬಂಗಾರಕೋಡಿ ಅವರು ಮೂರು ವಿಭಾಗದ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ, ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಶ್ರೀಮತಿ ವಿದ್ಯಾ ಅವರು ಆಲೆಟ್ಟಿ ಗ್ರಾಮದ ರಂಗತ್ತಮಲೆ ಆರ್.ಕೆ. ಕೂಸಪ್ಪ ಗೌಡ ಹಾಗೂ ಶ್ರೀಮತಿ ಸಣ್ಣಮ್ಮ ದಂಪತಿಯ ಪುತ್ರಿ. ಪೆರಾಜೆ ಗ್ರಾಮದ ಬಂಗಾರಕೋಡಿಯ ಹರೀಶ್ ಅವರ ಪತ್ನಿ.

ಈಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆದಿಶಕ್ತಿ ಸಂಘದ ಸದಸ್ಯೆಯಾಗಿದ್ದು, ತೊಡಿಕಾನದ ಸ್ವರ್ಣಶ್ರೀ ಸ್ರ್ರೀಶಕ್ತಿ ಸಂಘದ ಸದಸ್ಯೆ. ಇವರಿಗೆ ತೊಡಿಕಾನ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಹೇಮಾವತಿ ಅವರು ಮಾರ್ಗದರ್ಶನ ನೀಡಿದರು.