ಪೇರಾಲು-ಅಂಬ್ರೋಟಿ ಭಜನಾ ಮಂದಿರದಲ್ಲಿ ರಾಮ ತಾರಕ ಹೋಮ

0

ಶ್ರೀರಾಮ ಭಜನಾ ಮಂದಿರ ಪೇರಾಲು ಅಂಬ್ರೋಟಿ ಇಲ್ಲಿ ಅಯೋಧ್ಯಾ ಶ್ರೀರಾಮ ದೇವರ ಪ್ರತಿಷ್ಠಾಪನೆಯ ಅಂಗವಾಗಿ ಬೆಳಿಗ್ಗೆ ರಾಮ ತಾರಕ ಹೋಮ, ಸಾವಿರದ ಒಂದು ಬಾರಿ ರಾಮ ತಾರಕ ಮಂತ್ರ, ಹಾಗೂ ಭಜನಾ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಕರಸೇವಕರಾದ ದಿ. ನಾರಾಯಣ ಗೌಡ ಹಂಡನ ಮನೆ ಇವರ ಪರವಾಗಿ ಅವರ ಧರ್ಮಪತ್ನಿ ಶ್ರೀಮತಿ ವೇದಾವತಿಯವರನ್ನು ಹಾಗೂ ಮೋನಪ್ಪ ಗೌಡ ಪರಿವಾರ ಇವರನ್ನು ಸಾರ್ವಜನಿಕರ ಪರವಾಗಿ ಗೌರವಿಸಲಾಯಿತು.

ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಕಾರ್ಯದಲ್ಲಿ ನೂರಾರು ಜನರು ಭಾಗಿಗಳಾದರು.