ಹರಿಹರ ಪಲ್ಲತಡ್ಕ: ಸ್ತ್ರೀ ಶಕ್ತಿ ಗೊಂಚಲು ಸಮಿತಿ ವತಿಯಿಂದ ಡಿಸೈನ್ ಪಿಲ್ಲೂ ಕರಕುಶಲ ತರಬೇತಿ

0

ಹರಿಹರೇಶ್ವರ ದೇವಸ್ಥಾನ ಸಭಾಭವನದಲ್ಲಿ ಜ. 15 ರಂದು ಅಮೃತ ಸ್ತ್ರೀ ಶಕ್ತಿ ಗೊಂಚಲು ಸಮಿತಿ ವತಿಯಿಂದ ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರಿಗೆ ಡಿಸೈನ್ ಪಿಲ್ಲೂ ಕರಕುಶಲ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.


ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ತಾರಮಲ್ಲಾರ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಶುಭ ಹಾರೈಸಿದರು.

ಶ್ರೀಮತಿ ಪಾರ್ವತಿ ಮುಚ್ಚಾರ ಬಾಳು ಗೋಡು ಇವರು ಗೊಂಚಲು ಗುಂಪಿನ ಸದಸ್ಯರಿಗೆ ತರಬೇತಿಯನ್ನು ನೀಡಿದರು.

ಅಮೃತ ಗೊಂಚಲು ಗುಂಪಿನ ಅಧ್ಯಕ್ಷರಾದ ಶ್ರೀಮತಿ ಲತಾ ಹಿಮ್ಮತ್ ಕಿರಿಭಾಗ, ಕಾರ್ಯದರ್ಶಿ ಶ್ರೀಮತಿ ಅಮೀತ ಕಿರಿಭಾಗ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ತೀರ್ಥಕುಮಾರಿ ಕಿರಿಭಾಗ ಬಾಳು ಗೋಡು ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರು ಉಪಸ್ಥಿತರಿದ್ದರು.