ಉಬರಡ್ಕ: ನಿವೇದಿತಾ ಸಂಚಾಲನ ಸಮಿತಿ ವತಿಯಿಂದ ನಿವೃತ್ತ ಶಿಕ್ಷಕಿ ಶ್ರೀಮತಿ ಎ.ಜಿ. ಭವಾನಿಯವರಿಗೆ ಸನ್ಮಾನ

0

ಉಬರಡ್ಕ ಮಿತ್ತೂರು ಗ್ರಾಮದ ಉಬರಡ್ಕ ನಿವೇದಿತಾ ಸಂಚಾಲನ ಸಮಿತಿ ವತಿಯಿಂದ ಇತ್ತೀಚೆಗೆ ನಿವೃತ್ತರಾದ ಶಿಕ್ಷಕಿ ಶ್ರೀಮತಿ ಎ.ಜಿ. ಭವಾನಿ ಪಾನತ್ತಿಲ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಸೂಂತೋಡು, ಶ್ರೀಮತಿ ಪೂರ್ಣಿಮಾ ರಮೇಶ್, ಶ್ರೀಮತಿ ಅಮಿತಾ ರೈ, ಶ್ರೀಮತಿ ನಳಿನಾಕ್ಷಿ, ಶ್ರೀಮತಿ ರಂಜಿತಾ ಉಪಸ್ಥಿತರಿದ್ದರು.
ಶ್ರೀಮತಿ ವಿದ್ಯಾ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು. ನಿವೇದಿತಾ ಟ್ರಸ್ಟ್ ಆಡಳಿತ ಮಂಡಳಿಯ ಸಹ ಖಜಾಂಜಿ ಶ್ರೀಮತಿ ಶಾರದಾ ಡಿ.ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸಹಸಂಚಾಲಕಿ ಶ್ರೀಮತಿ ವಸಂತಿ ಕಲ್ಚಾರು ವಂದಿಸಿದರು.