ಕಲ್ಮಡ್ಕ ಪ್ರಾ.ಕೃ. ಪ.ಸ. ಸಂಘದ ಕೃಷಿ ಭೂಮಿಯಲ್ಲಿ ಅಡಿಕೆ ಗಿಡ ನಾಟಿ – ಮಾಹಿತಿ ಕಾರ್ಯಾಗಾರ

0

ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ತನ್ನ ಕಾರ್ಯವ್ಯಾಪ್ತಿಯ ಕಲ್ಮಡ್ಕ ಗ್ರಾಮದ ಕಾಚಿಲ ಎಂಬಲ್ಲಿ 2 ಎಕರೆ ಕೃಷಿ ಜಮೀನನ್ನು ಹೊಂದಿದ್ದು ಸದರಿ ಜಮೀನಿನಲ್ಲಿ ಅಡಿಕೆ ಗಿಡ ನಾಟಿ ಕಾರ್ಯಕ್ರಮವು ಊರಿನ ವಿವಿಧ ಸಂಘ ಸಂಸ್ಥೆಗಳು, ಸಂಘದ ಸದಸ್ಯರು, ನವೋದಯ ಸ್ವಸಹಾಯ ಗುಂಪುಗಳ ಸಹಭಾಗಿತ್ವದಲ್ಲಿ ಜ.24 ಮತ್ತು 25ರಂದು ಜರುಗಿತು.

ಪ್ರಗತಿಪರ ಕೃಷಿಕ ಗೋವಿಂದ ಭಟ್ ಅಮೈ, ಕೈಲಾರು ಈಶ್ವರ ಭಟ್, ಬಾಲಕೃಷ್ಣ ಗೌಡ ಕುಳ್ಸಿಗೆ ರವರು ಜೊತೆಯಾಗಿ ಪ್ರಥಮ ಗಿಡ ನಾಟಿ ಮಾಡಿ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಉದಯ ಕುಮಾರ್ ಬೆಟ್ಟ, ಉಪಾಧ್ಯಕ್ಷ ಲಕ್ಷ್ಮಿ ನಾರಾಯಣ ನಡ್ಕ, ನಿರ್ದೇಶಕರಾದ ಮಹಾಬಲ ಕೆರೆಕ್ಕೋಡಿ, ನಾರಾಯಣ ಹೊಳಕ್ಕೆರೆ, ಶ್ರೀಮತಿ ಸುಧಾ ಎಸ್ ಭಟ್, ಕರುಣಾಕರ ಜೆ, ರಾಮನಾಯ್ಕ ಉಡುವೆಕೋಡಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಜೆ,ನವೋದಯ ಗುಂಪುಗಳ ಪ್ರೇರಕ ಗಂಗಾಧರ ಪೊಳೆಂಜ,ಸಿಬ್ಬಂದಿಗಳು ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಗ್ರೀನ್ ಲೀಪ್ ಆಗ್ರೋ ಟೆಕ್ನಾಲಜಿ ಬೆಂಗಳೂರು, ಕರಾವಳಿ ಎಂಟರ್ ಪ್ರೈಸಸ್ ಸುಳ್ಯ ಇದರ ವತಿಯಿಂದ ಅಡಿಕೆ, ಕಾಳುಮೆಣಸು, ಕೊಕ್ಕೋ ಬೆಳೆಗಳಲ್ಲಿ ಎಲೆ ಚುಕ್ಕಿ ರೋಗ, ಹಿಂಗಾರ ಕೊಳೆರೋಗ ಮತ್ತು ಸೂಕ್ಷ್ಮ ಪೋಷಕಾಂಶಗಳ ಕುರಿತು ಮಾಹಿತಿ ಕಾರ್ಯಗಾರ ನಡೆಯಿತು.

ಗ್ರೀನ್ ಲೀಪ್ ಆಗ್ರೋ ಟೆಕ್ನಾಲಜಿ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಗಿರೀಶ್ , ಸುಳ್ಯ ಕರಾವಳಿ ಎಂಟರ್ ರ್ಪ್ರೈಸಸ್ ಮಾಲಕ ಚೆನ್ನಪ್ಪ ಗೌಡ ಕುಕ್ಕುಜೆ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು.

” ಸಂಘದ ಕೃಷಿ ತೋಟದ ವಾರ್ಷಿಕ ನಿರ್ವಹಣೆಗೆ ಉಚಿತ ಗೊಬ್ಬರದ ಪೋಷಣೆ” ಕರಾವಳಿ ಎಂಟರ್ ರ್ಪ್ರೈಸಸ್ ಮಾಲಕ ಚೆನ್ನಪ್ಪ ಗೌಡ ಕುಕ್ಕುಜೆ ಯವರು ತನ್ನ ಕಂಪನಿ ವತಿಯಿಂದ ಸಂಘದ ಕೃಷಿ ತೋಟವನ್ನು ವೈಜ್ಞಾನಿಕವಾಗಿ ಕಾಲ ಕಾಲಕ್ಕೆ ನಿರ್ವಹಣೆ ಮಾಡಿ ಮಾದರಿ ತೋಟವನ್ನಾಗಿ ರೂಪಿಸಲು ಬೇಕಾಗುವ ತಾಂತ್ರಿಕ ಮಾಹಿತಿ ಮತ್ತು ಗೊಬ್ಬರವನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದರು.

ನೀರಾವರಿ ಮತ್ತು ಗೊಬ್ಬರ ನೀಡಲು ಸಂಪೂರ್ಣವಾಗಿ ಸ್ವಯಂ ಚಾಲಿತ ವ್ಯವಸ್ಥೆ ಅಳವಡಿಕೆ” ಸುಮಾರು 1100 ನಾಟಿ ಮಾಡಿರುವ ಅಡಿಕೆ ಗಿಡಗಳಿಗೆ ಸಂಪೂರ್ಣವಾಗಿ ಸ್ವಯಂ ಚಾಲಿತವಾಗಿ ಡ್ರಿಪ್ ಮೂಲಕ ನೀರು ಮತ್ತು ಗೊಬ್ಬರ ಸರಬರಾಜು ಮಾಡುವ ವ್ಯವಸ್ಥೆಯನ್ನು ಜೈನ್ ಡ್ರಿಪ್ ಇರಿಗೇಷನ್ ಕಂಪನಿಯ ಡೀಲರ್ ಕಿಸಾನ್ ಆಗ್ರೋ ಟೂಲ್ಸ್ ಪುತ್ತೂರು ಇದರ ಮಾಲಕ ಅಭಿಜಿತ್ ಅಳವಡಿಸಿ ಕೊಟ್ಟಿರುತ್ತಾರೆ.

“ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಎಕ್ಕರೆಗಿಂತಲೂ ಹೆಚ್ಚು ವಿಸ್ತೀರ್ಣದ ಕೃಷಿ ಭೂಮಿಯನ್ನು ಹೊಂದಿದ ಏಕೈಕ ಸಹಕಾರ ಸಂಘ ನಮ್ಮದು ಎಂಬುದು ಹೆಮ್ಮೆಯ ವಿಚಾರ ಸದರಿ ಜಮೀನಿನಲ್ಲಿ ಮುಖ್ಯ ಬೆಳೆಯಾಗಿ ಅಡಿಕೆ ಮತ್ತು ವಿವಿಧ ಉಪ ಬೆಳೆ, ಹಣ್ಣಿನ ಬೆಳೆಗಳನ್ನು ಬೆಳೆದು ಮಾದರಿ ತೋಟವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು”. ಎಂದು ಸಂಘದ ಅಧ್ಯಕ್ಷ ಉದಯ ಕುಮಾರ್ ಬೆಟ್ಟ ತಿಳಿಸಿದರು.