ಸುಳ್ಯದಲ್ಲಿ ರವಿಕೆ ಪ್ರಸಂಗ ಸಿನಿಮಾದ ಪೋಸ್ಟರ್ ಅಭಿಯಾನ

0

ಬಹು ನಿರೀಕ್ಷೆ ಮೂಡಿಸಿರುವ ಸುಳ್ಯದ ಸಂತೋಷ್ ಕೊಡೆಂಕಿರಿ ನಿರ್ದೇಶನದ ರವಿಕೆ ಪ್ರಸಂಗ ಸಿನಿಮಾದ ಬಿಡುಗಡೆ ಫೆ.16 ರಂದು ನಡೆಯಲಿದ್ದು, ಇದರ ಪ್ರಚಾರಾರ್ಥ ಅಟೋರಿಕ್ಷಾಗಳಿಗೆ ಪೋಸ್ಟರ್ ಅಂಟಿಸುವ ಅಭಿಯಾನ ಇಂದು ಸುಳ್ಯದ ಸದರ್ನ್ ರೆಸಿಡೆನ್ಸಿ ಹೋಟೆಲ್ ನ ಎದುರುಗಡೆ ನಡೆಯಿತು.


ಸುಳ್ಯದ ಅಟೋರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕರವರು ರಿಕ್ಷಾಗಳಿಗೆ ಪೋಸ್ಟರ್ ಅಂಟಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.


ರವಿಕೆ ಪ್ರಸಂಗ ಸಿನಿಮಾ ನಿರ್ದೇಶಕ ಸಂತೋಷ್ ಕೊಡೆಂಕಿರಿ, ಚಿತ್ರಕಥೆ ಬರೆದ ಶ್ರೀಮತಿ ಪಾವನಾ ಸಂತೋಷ್, ನ.ಪಂ. ಸದಸ್ಯ ಹಾಗೂ ದೃಷ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಭಟ್ ಕೊಡೆಂಕಿರಿ, ನ.ಪಂ.ಸದಸ್ಯೆ ಶ್ರೀಮತಿ ಶಿಲ್ಪಾ ಸುದೇವ್, ಶ್ರೀಮತಿ ಸುಮತಿ ಜಯನಗರ, ರಿಕ್ಷಾ ಚಾಲಕರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಸಂತೋಷ್ ಕೊಡೆಂಕಿರಿಯವರು ” ರವಿಕೆ ಪ್ರಸಂಗ ಸಿನಿಮಾ ಇಡೀ ಕುಟುಂಬ ಒಟ್ಟಿಗೆ ಕುಳಿತು ನೋಡುವಂತಹ ಸದಭಿರುಚಿಯ ಸಿನಿಮಾವಾಗಿದ್ದು ಇದಕ್ಕೆ ಸೆನ್ಸಾರ್ ಯು.ಎ. ಸರ್ಟಿಫಿಕೇಟ್ ಸಿಕ್ಕಿದೆ. ರಾಜ್ಯಾದ್ಯಂತ ರಿಕ್ಷಾಚಾಲಕರ ಮೂಲಕ ಪೋಸ್ಟರ್ ಪ್ರಚಾರ ನಡೆಸಿ ಸಿನಿಮಾದ ಪ್ರಮೋಷನ್ ನಡೆಸಲಾಗುವುದು ” ಎಂದರು.