ನಾರ್ಕೋಡು ಕುಟುಂಬದ ತರವಾಡು ದೈವಸ್ಥಾನದಲ್ಲಿ ಶ್ರೀ ದೈವಗಳ ಕಳಿಯಾಟ ಉತ್ಸವ

0

ನಾರ್ಕೋಡು ಕುಟುಂಬದ ತರವಾಡು ಶ್ರೀ ವಿಷ್ಣುಮೂರ್ತಿ, ಧರ್ಮದೈವ ಹಾಗೂ ಪಾಷಾಣಮೂರ್ತಿ ಉಪದೈವಗಳ ದೈವಸ್ಥಾನದಲ್ಲಿ ದೈವಗಳ ಕಳಿಯಾಟ ಮಹೋತ್ಸವ ವು ಜ.27 ಮತ್ತು 28 ರಂದು ನಡೆಯಿತು.

ಜ.27 ರಂದು ಬೆಳಗ್ಗೆ ಗಣಪತಿ ಹವನವಾಗಿ ಉಗ್ರಾಣ ತುಂಬುವ ಕಾರ್ಯಕ್ರಮ ಬಳಿಕ ನಾಗತಂಬಿಲ ಸೇವೆ ನಡೆದು ಪ್ರಸಾದ ವಿತರಣೆ ಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.

ರಾತ್ರಿ ಉಪದೈವಗಳ ಕೋಲವು ನಡೆಯಿತು. ಜ.28 ರಂದು ಪೂರ್ವಾಹ್ನ ಶ್ರೀ ರಕ್ತೇಶ್ವರಿ ಶ್ರೀ ವರ್ಣಾರ ಪಂಜುರ್ಲಿ,ನಾಗಚಾಮುಂಡಿ ದೈವಗಳ ಕೋಲವಾಗಿ ಮಧ್ಯಾಹ್ನ
ಶ್ರೀವಿಷ್ಣುಮೂರ್ತಿ ಧರ್ಮದೈವ ಶ್ರೀ ಪಾಷಾಣಮೂರ್ತಿ ದೈವಗಳ ಕೋಲವು ನಡೆಯಿತು. ಮಧ್ಯಾಹ್ನ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.

ಅದೇ ದಿನ ರಾತ್ರಿ ಗುಳಿಗ ದೈವದ ಕೋಲವು ನಡೆಯಿತು. ನಾರ್ಕೋಡು ಕುಟುಂಬದ ಹಿರಿಯ ‌ಕಿರಿಯ ಸದಸ್ಯರು ಉಪಸ್ಥಿತರಿದ್ದರು. ಊರಿನ ಹಾಗೂ ಪರ ಊರಿನ ಭಕ್ತಾದಿಗಳು ಆಗಮಿಸಿ ‌ಪ್ರಸಾದ ಸ್ವೀಕರಿಸಿದರು.