ಫೆ.3-4: ಆಲೆಟ್ಟಿ ಗುಂಡ್ಯ ಮಾಡಾರಮನೆ ಉಳ್ಳಾಕುಲು ದೈವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವ- ಧರ್ಮ ನಡಾವಳಿ ನೇಮೋತ್ಸವ

0

ಆಲೆಟ್ಟಿ ಗ್ರಾಮದ ಗುಂಡ್ಯ ಮಾಡಾರಮನೆ ಶ್ರೀ ಉಳ್ಳಾಕುಲು ದೈವಸ್ಥಾನದಲ್ಲಿ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರ ನೇತೃತ್ವದಲ್ಲಿ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಹಾಗೂ ಶ್ರೀ ದೈವಗಳ ಧರ್ಮ ನಡಾವಳಿ ನೇಮೋತ್ಸವ ವು ಫೆ.3 ಮತ್ತು 4 ರಂದು ನಡೆಯಲಿರುವುದು.

ಫೆ.2 ರಂದು ಸಂಜೆ ಶ್ರೀ ಸದಾಶಿವ ಭಜನಾ ಸಂಘ ಆಲೆಟ್ಟಿ ಹಾಗೂ ಪುಂಡರೀಕ ನಾಯಕ್ ತಂಡ, ನವೋದಯ ಸ್ವಸಹಾಯ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಫೆ.3 ರಂದು ಪೂರ್ವಾಹ್ನ ಉಗ್ರಾಣ ತುಂಬುವ ಕಾರ್ಯಕ್ರಮ ನಡೆದು ತಂತ್ರಿವರ್ಯರಿಂದ ಗಣಪತಿ ಹವನ, ನವಕ, ನವಕಾಭಿಷೇಕ, ನಾಗತಂಬಿಲ, ಸಪರಿವಾರ ದೈವ ದೇವರುಗಳ ತಂಬಿಲ ನಡೆದು ಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ ಗಂಟೆ 7.00 ರಿಂದ ಶ್ರೀ ಉಳ್ಳಾಕುಲು ಸಪರಿವಾರ ದೈವ ಗಳ ಭಂಡಾರ ಏರಿ ನೇಮೋತ್ಸವವಾಗಲಿದೆ. ಉಳ್ಳಾಕುಲು ದೈವದ ಕಿರಿಯರ ಮತ್ತು ಹಿರಿಯರ ನೇಮದ ವಾಲಸರಿಯಾಗಿ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿರುವುದು.
ಮರುದಿನ ಬೆಳಗ್ಗೆ ಸಪರಿವಾರ ದೈವಗಳಾದ ಶ್ರೀ ಮಲೆ ಚಾಮುಂಡಿ ದೈವ, ಶ್ರೀ ಪುರುಷ ದೈವ, ಶ್ರೀ ಮದಿಮಾಲ್, ಶ್ರೀ ಅಜ್ಜಿ ,ಶ್ರೀ ಪೊಟ್ಟನ್ ದೈವ, ಶ್ರೀ ಪಂಜುರ್ಲಿ ದೈವ, ಶ್ರೀ ಕೂಜಿ ದೈವಗಳ ನೇಮವು ನಡೆಯಲಿದೆ. ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಿ ಮಧ್ಯಾಹ್ನ ಅನ್ನ ಸಂತರ್ಪಣೆಯಾಗಲಿರುವುದು ಎಂದು ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಅಶೋಕ ಪ್ರಭು ತಿಳಿಸಿದರು.