ಪೆರಾಜೆ : ಬಂಟೋಡಿ ಅಗ್ನಿ ಯುವಕ ಮಂಡಲದ ವಾರ್ಷಿಕ ಮಹಾಸಭೆ

0

ಅಧ್ಯಕ್ಷರಾಗಿ ವಿಜಯ್ ಕುಮಾರ್ ಮತ್ತು ಕಾರ್ಯದರ್ಶಿಯಾಗಿ ಶ್ರೀನಾಥ್ ಪುನರಾಯ್ಕೆ

ಪೆರಾಜೆ ಗ್ರಾಮದ ಬಂಟೋಡಿ ಅಗ್ನಿ ಯುವಕ ಮಂಡಲದ ಮೊದಲ ವಾರ್ಷಿಕ ಸಭೆಯು ಯುವಕ ಮಂಡಲದ ಅಧ್ಯಕ್ಷ ವಿಜಯ್ ಕುಮಾರ್ ಪಿ. ಎಸ್. ರವರ ಅಧ್ಯಕ್ಷತೆಯಲ್ಲಿ ಜ.28 ರಂದು ನಡೆಯಿತು.
ಯುವಕ ಮಂಡಲದ ಕಾರ್ಯದರ್ಶಿ ಶ್ರೀನಾಥ್ ಎಂ.ಎಂ. ವಾರ್ಷಿಕ ವರದಿ ಮಂಡಿಸಿದರು.


ಸಭೆಯಲ್ಲಿ ಯುವಕ ಮಂಡಲದ ಪ್ರಮುಖವಾದ ನಿಯಮಗಳ ಚರ್ಚೆ ಮತ್ತು ಅನುಷ್ಠಾನದ ಬಗ್ಗೆ ಹಾಗೂ ಮುಂದಿನ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ವಿಜಯ್ ಕುಮಾರ್ ಪಿ.ಎಸ್. ಪುನರಾಯ್ಕೆಯಾದರು.


ಉಪಾಧ್ಯಕ್ಷರಾಗಿ ಹೇಮಚಂದ್ರ ಪೆರಾಜೆ, ಕಾರ್ಯದರ್ಶಿಯಾಗಿ ಶ್ರೀನಾಥ್ ಪಡುಮಜಲು, ಸಹ ಕಾರ್ಯದರ್ಶಿಯಾಗಿ ಸಾಕೇತ್ ಕೆ. ಕೆ., ಖಜಾಂಜಿಯಾಗಿ ಕೌಶಿಕ್ ಕೆ. ಎಸ್., ಕ್ರೀಡಾ ಸಂಚಾಲಕರಾಗಿ ವಿಷ್ಣು ಪ್ರಸಾದ್ ಪಿ.ಡಿ., ಸಾಂಸ್ಕೃತಿಕ ಸಂಚಾಲಕರಾಗಿ ಹರೀಶ್ ಪಿ.ಪಿ. ಆಯ್ಕೆಯಾದರು.
ಹರೀಶ್ ಬಿ.ಪಿ. ಪ್ರಾರ್ಥಿಸಿ, ಸಚಿನ್ ಪಿ.ಡಿ. ಸ್ವಾಗತಿಸಿದರು. ಸಾಕೇತ್ ಕೆ. ಕೆ. ವಂದಿಸಿ, ಶ್ರೀನಾಥ್ ಎಂ.ಎಂ. ಕಾರ್ಯಕ್ರಮ ನಿರೂಪಿಸಿದರು.