ಸುಳ್ಯ ಸಿ ಎ ಬ್ಯಾಂಕ್ ಕಚೇರಿ ವ್ಯವಸ್ಥಾಪಕರಾಗಿದ್ದ ದಿನೇಶ್ ಕುಮಾರ್ ನಿವೃತ್ತಿ : ಬೀಳ್ಕೊಡುಗೆ

0

ಕಳೆದ 39 ವರ್ಷಗಳಿಂದ ಸುಳ್ಯ ಸಿ.ಎ ಬ್ಯಾಂಕಿನಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ ಕಚೇರಿ ಮ್ಯಾನೇಜರ್ ಹುದ್ದೆಯಲ್ಲಿದ್ದು ಜ.31ರಂದು ನಿವೃತ್ತಿ ಹೊಂದಿದ ದಿನೇಶ್ ಕುಮಾರ್ ಕೆ ಸಿ ಇವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಎ ಎಸ್ ವಿಜಯಕುಮಾರ್ ಸಭಾಭವನದಲ್ಲಿ ಜರಗಿತು.

ಸಂಘದ ಅಧ್ಯಕ್ಷ ವಿಕ್ರಂ ಅಡ್ಪಂಗಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷ ಚಂದ್ರಶೇಖರ ನಡುಮನೆ, ಮಾಜಿ ಅಧ್ಯಕ್ಷ ಹರೀಶ್ ಬೂಡುಪನ್ನೆ, ಸಂಘದ ಆಡಳಿತ ಮಂಡಳಿ ನಿರ್ದೇಶಕರು, ಸಿಬ್ಬಂದಿ ವರ್ಗದವರು, ಕಾನೂನು ಸಲಹೆಗಾರರು, ಪಿಗ್ಮಿ ಸಂಗ್ರಹಕರು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಎಸ್ ಪಿ ಸ್ವಾಗತಿಸಿದರು. ಮಾಜಿ ಉಪಾಧ್ಯಕ್ಷರು ಪ್ರಕೃತ ನಿರ್ದೇಶಕರಾಗಿರುವ ವೆಂಕಟರಮಣ ಮುಳ್ಯ, ಕಾನೂನು ಸಲಹೆಗಾರರಾಗಿರುವ ಭಾಸ್ಕರ ರಾವ್ ಪಿ, ಆಂತರಿಕ ಲೆಕ್ಕಪರಿಶೋಧಕರಾಗಿರುವ ಶಿವಪ್ರಸಾದ್ ಎಸ್ ನಿವೃತ್ತ ರಿಗೆ ಶುಭ ಹಾರೈಸಿದರು. ಬ್ಯಾಂಕ್ ನ ಉಪಾಧ್ಯಕ್ಷ ಚಂದ್ರಶೇಖರ ನಡುಮನೆ‌ ವಂದಿಸಿದರು.