ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಶ್ರೀಮತಿ ಕವಿತಾ ಗಂಗಾಧರ ಅಲೇಕಿಯವರಿಗೆ ಬಹುಮಾನ

0

ತಮಿಳುನಾಡಿನಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಮುರುಳ್ಯ ಗ್ರಾಮದ ಅಲೇಕಿ ಗಂಗಾಧರ ಗೌಡರವರ ಪತ್ನಿ ಶ್ರೀಮತಿ ಕವಿತಾ ಗಂಗಾಧರ ಅಲೇಕಿ ಕಂರ್ಬುರವರು ೧೫೦೦ ಓಟದಲ್ಲಿ ಪ್ರಥಮ, ೮೦೦, ೪೦೦ ಓಟದಲ್ಲಿ ದ್ವಿತೀಯ ಹಾಗೂ ರಾಷ್ಟ್ರಮಟ್ಟದ ರಿಲೇಯಲ್ಲಿ ದ್ವಿತೀಯ ಸ್ಥಾನಿಯಾಗಿರುತ್ತಾರೆ.


ಈ ಹಿಂದೆ ಇವರು ಜಿಲ್ಲಾಮಟ್ಟಕ್ಕೆ ಮತ್ತು ರಾಜ್ಯಮಟ್ಟದ ೧೦೦, ೪೦೦, ೮೦೦ ಮೀಟರ್ ಓಟದಲ್ಲಿ ಪ್ರಥಮ, ದ್ವಿತೀಯ ಸ್ಥಾನಿಯಾಗಿರುತ್ತಾರೆ. ಅನಂತರ ರಾಜ್ಯಮಟ್ಟದ ರಿಲೇಯಲ್ಲಿ ೨ನೇ ಸ್ಥಾನ, ಓಟ ೮೦೦ ಮೀಟರ್ ಪ್ರಥಮ, ೨೦೦ ಮೀಟರ್ ದ್ವಿತೀಯ , ಉದ್ದ ಜಿಗಿತದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಇವರು ಪಂಜ ಗ್ರಾಮದ ಕಂರ್ಬು ಹೊನ್ನಪ್ಪ ಹಾಗೂ ಶಾರದ ದಂಪತಿಗಳ ಪುತ್ರಿ .