ನಾಗಪಟ್ಟಣ ಸದಾಶಿವ ದೇವಳದ ಪ್ರತಿಷ್ಠಾ ವಾರ್ಷಿಕೋತ್ಸವದ ಪೂರ್ವ ಭಾವಿ ಸಭೆ

0

ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವದ ಪೂರ್ವ ಭಾವಿ ಸಭೆಯು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಕೋಲ್ಚಾರು ರವರ ಅಧ್ಯಕ್ಷತೆಯಲ್ಲಿ
ಫೆ.11 ರಂದು ದೇವಳದ ಸಭಾಂಗಣದಲ್ಲಿ ನಡೆಯಿತು.

ಮುಂದಿನ ಮಾರ್ಚ್‌ ತಿಂಗಳಲ್ಲಿ ವಾರ್ಷಿಕ ಮಹೋತ್ಸವ ಆಚರಿಸುವ ಕುರಿತು ವಿಚಾರ ವಿಮರ್ಶಿಸಲಾಯಿತು. ಕಾರ್ಯಕ್ರಮದ ಆಮಂತ್ರಣ ಪತ್ರ ಮುದ್ರಣ ಹಾಗೂ ಇನ್ನಿತರ ಅವಶ್ಯಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಸುಧಾಮ ಆಲೆಟ್ಟಿ, ಬಾಬು ಗೌಡ ಕಡೆಂಗ, ರಾಧಾಕೃಷ್ಣ ಕೋಲ್ಚಾರು,
ಹೇಮನಾಥ ಕುರುಂಜಿ,
ತಂಗವೇಲು ಕುದ್ಕುಳಿ, ವಿಜಯಕುಮಾರಿ ನಾಗಪಟ್ಟಣ ಮತ್ತು ಶರತ್ ಗುಡ್ಡೆಮನೆ, ಸಿಬ್ಬಂದಿ ವರ್ಗದವರು ಹಾಗೂ ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.