ನಾಗಪಟ್ಟಣ ಸದಾಶಿವ ದೇವಸ್ಥಾನದ ವಾರ್ಷಿಕ ಮಹೋತ್ಸವದ ಆಮಂತ್ರಣ ಬಿಡುಗಡೆ

0

ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ಮಾ.11 ರಿಂದ 13 ರ ತನಕ ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆಯು ಇಂದು ದೇವಳದಲ್ಲಿ ನಡೆಯಿತು.
ದೇವಳದ ಅರ್ಚಕರು ಪ್ರಾರ್ಥಿಸಿದ ಬಳಿಕ ಆಮಂತ್ರಣ ಪತ್ರವನ್ನು ‌ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ‌ಕೋಲ್ಚಾರು ರವರು‌ ಬಿಡುಗಡೆಗೊಳಿಸಿದರು.‌ ಸದಸ್ಯರಾದ ಬಾಬು ಗೌಡ ಕಡೆಂಗ, ರಾಧಾಕೃಷ್ಣ ಕೋಲ್ಚಾರು, ತಂಗವೇಲು ನಾಗಪಟ್ಟಣ, ಆನಂದ ಗೌಡ ಪರಿವಾರ, ರಾಮ್ ಸುಂದರಂ ನಾಗಪಟ್ಟಣ, ಶರತ್ ಗುಡ್ಡೆಮನೆ ಹಾಗೂ ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.