ಕೊಡಗು ಸಂಪಾಜೆ: ಕಡಮಕಲ್ಲು ರಬ್ಬರ್ ಎಸ್ಟೇಟ್ ನಲ್ಲಿ ಹಗಲುಹೊತ್ತಿನಲ್ಲಿ ಕಾಡಾನೆ ಪ್ರತ್ಯಕ್ಷ

0

ಪಟಾಕಿ ಹಚ್ಚಿ ಓಡಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು

ಕೊಡಗು ಸಂಪಾಜೆ ಗ್ರಾಮದ ಕಡಮಕಲ್ಲು ರಬ್ಬರ್ ಎಸ್ಟೇಟ್ ನಲ್ಲಿ ಎರಡು ಕಾಡಾನೆಗಳು ಹಗಲುಹೊತ್ತಿನಲ್ಲಿ ಪ್ರತ್ಯಕ್ಷಗೊಂಡು, ಸ್ಥಳೀಯ ನಿವಾಸಿಗಳಿಗೆ ಭಯ ಮೂಡಿಸಿದಿ ಘಟನೆ ಮಾ.2 ಬೆಳಿಗ್ಗೆ ಸಂಭವಿಸಿದೆ.

ಬೆಳಿಗ್ಗೆ 10.30ರ ವೇಳೆಗೆ ಸಂಪಾಜೆಯ ಜೇಡ್ಲ ಶ್ರೀಧರ ಭಟ್ ಎಂಬವರು ತಮ್ಮ ಜೀಪಿನಲ್ಲಿ ಬರುತ್ತಿದ್ದ ವೇಳೆ ಕಡಮಕಲ್ಲು ರಬ್ಬರ್ ಎಸ್ಟೇಟ್ ಬಳಿ ಎರಡು ಕಾಡಾನೆಗಳು ಹಗಲು ಹೊತ್ತಿನಲ್ಲಿ ಪ್ರತ್ಯಕ್ಷಗೊಂಡಿದ್ದು, ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂದು ಪಟಾಕಿ ಹಚ್ಚಿ ಓಡಿಸಿದರೆಂದು ತಿಳಿದುಬಂದಿದೆ.