ತೊಡಿಕಾನ: ಕುತ್ತಮೊಟ್ಟೆ ಕುಟುಂಬದ ಧರ್ಮದೈವ ಹಾಗೂ ಪರಿವಾರ ದೈವಗಳ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಧರ್ಮ ನಡಾವಳಿ ಹಿನ್ನೆಲೆ

0

ಕುಂಟುಕಾಡು ಹಾಗೂ ದೊಡ್ಡಕುಮೇರಿ ಭಾಗದವರಿಂದ ಶ್ರಮದಾನ

ತೊಡಿಕಾನ ಗ್ರಾಮದ ಕುತ್ತಮೊಟ್ಟೆ ಕುಟುಂಬದ ಧರ್ಮದೈವ ಶ್ರೀ ರುದ್ರಚಾಮುಂಡಿ, ಶ್ರೀ ವಿಷ್ಣುಮೂರ್ತಿ, ಶ್ರೀ ಪಾಲಿಸ್ ರಾಯ ಹಾಗೂ ಪರಿವಾರ ದೈವಗಳ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಧರ್ಮ ನಡಾವಳಿಯ ಪ್ರಯುಕ್ತ ಭಕ್ತಾದಿಗಳಿಂದ ಶ್ರಮದಾನ ಕಾರ್ಯಕ್ರವು ಮಾ.21ರಂದು ನಡೆಯಿತು.

ತೊಡಿಕಾನ ಗ್ರಾಮದ ಕುಂಟುಕಾಡು ಮತ್ತು ದೊಡ್ಡಕುಮೇರಿ ಭಾಗದ ಗ್ರಾಮಸ್ಥರು ಶ್ರಮದಾನದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಕುತ್ತಮೊಟ್ಟೆ ಕುಟುಂಬದ ಅಭಿವೃದ್ಧಿ ಟ್ರಸ್ಟ್ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಕುಟುಂಬದ ಯಜಮಾನ ಚಿನ್ನಪ್ಪ ಗೌಡ ಕುತ್ತಮೊಟ್ಟೆ ಸೇರಿದಂತೆ ಕುತ್ತಮೊಟ್ಟೆ ಕುಟುಂಬಸ್ಥರು, ಕುಂಟುಕಾಡು ಹಾಗೂ ದೊಡ್ಡಕುಮೇರಿ ಭಾಗದ ಗ್ರಾಮಸ್ಥರು ಉಪಸ್ಥಿತರಿದ್ದರು.

ಕುತ್ತಮೊಟ್ಟೆ ಕುಟುಂಬದ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮಾ.26ರಿಂದ 28ರವರೆಗೆ ಜರುಗಲಿದ್ದು, ದೈವಗಳ ಧರ್ಮ ನಡಾವಳಿಯು ಮೇ.23 ಮತ್ತು 24ರಂದು ಜರುಗಲಿದೆ.