ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ರಿಗೆ ಅನಿಂದಿತ್ ಕೊಚ್ಚಿ ಬಾರಿಕೆ ಯವರ ‘ರಿ ಕಾಲಿಂಗ್ ಅಮರ ಸುಳ್ಯ”ಪುಸ್ತಕ ಪ್ರತಿ ಹಸ್ತಾಂತರ

0

ದ. ಕ. ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಸುಳ್ಯ ಪ್ರವಾಸ ಸಂದರ್ಭದಲ್ಲಿ ಅನಿಂದಿತ್ ಕೊಚ್ಚಿ ಬಾರಿಕೆ ರವರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿತ, ಸುಳ್ಯದ ವೀರ ಇತಿಹಾಸದ ದಾಖಲೆಗಳನ್ನೊಳಗೊಂಡಿರುವ “ರಿಕಾಲಿಂಗ್ ಅಮರ ಸುಳ್ಯ” ಪುಸ್ತಕದ ಗೌರವ ಪ್ರತಿಯನ್ನು ನೀಡಿದರು. ಪುಸ್ತಕ ಲೇಖಕ ಅನಿಂದಿತ್ ಬಗ್ಗೆ ಚೌಟರವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದ ಪ್ರಾಮುಖ್ಯತೆಯನ್ನು ಸ್ಮರಿಸಲು ಮತ್ತು ಸಂರಕ್ಷಿಸಲು ಪ್ರಯತ್ನಗಳನ್ನು ಬಲಪಡಿಸುವ ವಿಚಾರವಾಗಿ ಒಂದು ವಿಶೇಷ ಮನವಿ ಪತ್ರವನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಪ್ರಮುಖರಾದ ನ.ಸೀತಾರಾಮ್,ವೆಂಕಟ್ ವಲಳಂಬೆ, ಹರೀಶ್ ಕಂಜಿಪಿಲಿ,ಲಕ್ಷ್ಮೀನಾರಾಯಣ ಕಜೆಗದ್ದೆ ಮತ್ತಿತರರು ಉಪಸ್ಥಿತರಿದ್ದರು.