ಕೇನ್ಯ: ಕಬಡ್ಡಿ ಪಂದ್ಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಸ್ವಾಮಿ ಕೊರೊಗಜ್ಜ ಗೆಳೆಯರ ಬಳಗ ಕಾಯಂಬಾಡಿ ಕಣ್ಕಲ್ ಇದರ ವತಿಯಿಂದ ಮಾ. 28 ರಂದು ಹೊನಲು ಬೆಳಕಿನ 65 ಕೆ. ಜಿ. ವಿಭಾಗದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಮತ್ತು ಸನ್ಮಾನ ಕಾರ್ಯಕ್ರಮ ಜರುಗಲಿದೆ.

ಇದರ ಆಮಂತ್ರಣ ಪತ್ರಿಕೆ ಯನ್ನು ಕಣ್ಕಲ್ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ ರವಿ ಅಮ್ಮಾಣ್ಣಾಯ ಕಣ್ಕಲ್ ಬೀಡು ರವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಸ್ವಾಮಿ ಕೊರಗಜ್ಜ ಗೆಳೆಯರ ಬಳಗ ದ ಅಧ್ಯಕ್ಷ ಪ್ರಶಾಂತ್ ಗೌಡ ಕಾಯಂಬಾಡಿ, ಕಾರ್ಯದರ್ಶಿ ವಿಶ್ವನಾಥ,ಸೀತಾರಾಮ, ಗಣೇಶ್ ಆಚಾರ್ಯ,ಭರತ್ ಕೊಳಂಬೆ, ರಾಜು,ಆರಾಧನ ಸಮಿತಿ ಯ ಅಧ್ಯಕ್ಷ ಯುವರಾಜ್ ಕಣ್ಕಲ್ ಉಪಸ್ಥಿತರಿದ್ದರು.