ಕೆಮ್ಮಲೆ ಉಳ್ಳಾಕುಲು ನೇಮೋತ್ಸವ

0


ಎಣ್ಮೂರು ಗ್ರಾಮದ ಹೇಮಳ ಶ್ರೀ ಕ್ಷೇತ್ರ ಕೆಮ್ಮಲೆ ನಾಗಬ್ರಹ್ಮ ದೇವಸ್ಥಾನ ಕೆಮ್ಮಲೆ ಬ್ರಹ್ಮರ ಮೂಲಸ್ಥಾನ ಹಾಗೂ ಉಲ್ಲಾಕುಲು ಪರಿವಾರ ದೈವಗಳ ದೈವಸ್ಥಾನದಲ್ಲಿ ವಾರ್ಷಿಕ ಉಲ್ಲಾಕುಲು ನೇಮೋತ್ಸವವು ಮಾರ್ಚ್ ೨೨ ರಂದು ನಡೆಯಿತು. ನಾಗಬ್ರಹ್ಮ ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ಸಂಪ್ರದಾಯದಲ್ಲಿ ಭಂಡಾರ ಬಂದು ದೈವಸ್ಥಾನದಲ್ಲಿ ನೇಮೋತ್ಸವ ನಡೆಯಿತು. ನಂತರ ಕೈಕಾಣಿಕೆ ಗಂಧ ಪ್ರಸಾದ ಅನ್ನಸಂತರ್ಪಣೆ ನಡೆಯಿತು.


ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಕೆ., ಟ್ರಸ್ಟ್ ಅಧ್ಯಕ್ಷ ನಾರಾಯಣ ಕೊರ್ಜೆ, ಪ್ರದಾನ ಕಾರ್ಯದರ್ಶಿ ಜನಾರ್ಧನ್, ಸದಸ್ಯರಾದ ಜಯಾನಂದ, ನಾರಾಯಣ, ಮುಖ್ಯಸ್ಥ ಶೇಸಪ್ಪ ಗೌಡ, ದಿನೇಶ್ ಹೆಚ್, ವಸಂತ ಹೆಚ್, ಮಿಥುನ್ ಎ, ಗಣೇಶ್ ಎ, ಪ್ರಕಾಶ್ಚಂದ್ರ, ಹರ್ಷಿತ್ ಎ, ಬಾಬು ಗೌಡ, ನೀರತ್ ಎ ಮತ್ತು ಊರ ಪರ ಊರ ಭಕ್ತಾದಿಗಳು ಉಪಸ್ಥಿತರಿದ್ದರು.