ರೋಟರಿ ಕ್ಲಬ್ ವತಿಯಿಂದ ಸುಳ್ಯದ ಬಸ್ ನಿಲ್ದಾಣದಲ್ಲಿ ಮತದಾರರ ಜಾಗೃತಿ ಬೀದಿ ನಾಟಕ ಪ್ರದರ್ಶನ

0

ಅಂತರಾಷ್ಟ್ರೀಯ ಸಂಸ್ಥೆ ಪುತ್ತೂರಿನ ರೋಟರಿ ಕ್ಲಬ್ ಎಲೈಟ್ ವತಿಯಿಂದ ಮುಂಬರುವ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾರರು ಜಾಗೃತರಾಗಬೇಕೆಂಬ ಸಂದೇಶ ಸಾರುವ ಬೀದಿ ನಾಟಕವು ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಇಂದು ಬೆಳಗ್ಗೆ ನಡೆಯಿತು.

ಪುತ್ತೂರು ರೋಟರಿ ಕ್ಲಬ್ಬಿನ ಆಶ್ರಯದಲ್ಲಿ ಕಲಾವಿದ ಮೌನೇಶ್ ವಿಶ್ವಕರ್ಮ ರವರ ಬಳಗದವರಿಂದ ನಾಟಕ ಪ್ರದರ್ಶನವಾಯಿತು.
ಈ ಸಂದರ್ಭದಲ್ಲಿ ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗ, ರೋಟರಿ ಕ್ಲಬ್ ಸುಳ್ಯ ಸಿಟಿಯ ಅಧ್ಯಕ್ಷ ಗಿರೀಶ್ ನಾರ್ಕೋಡು ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು , ಪುತ್ತೂರು ರೋಟರಿ ಕ್ಲಬ್ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಎರಡು ದಿನಗಳ ಕಾಲ ದಕ್ಷಿಣ ಜಿಲ್ಲೆಯ ಪ್ರತಿ ‌ತಾಲೂಕಿನ ಕೇಂದ್ರ ಭಾಗದಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನ ವಾಗಲಿರುವುದು ಎಂದು ಸಂಘಟಕರು ತಿಳಿಸಿದರು.